Advertisement
ಕಾರ್ಯರೂಪ ಹಂತದಲ್ಲಿ ಹಲವು ಯೋಜನೆಕರಾವಳಿಯಲ್ಲಿ ಹಲವು ಮೀನುಗಾರಿಕೆ ಯೋಜನೆಗಳು ಕಾರ್ಯರೂಪ ಹಂತದ ಲ್ಲಿದೆ. ದಶಕಗಳ ಬೇಡಿಕೆಯಾಗಿದ್ದ ಗಂಗೊಳ್ಳಿ ಕಿರು ಬಂದರು ಅಭಿವೃದ್ಧಿಗೆ 12 ಕೋ.ರೂ. ವೆಚ್ಚದ ಮಂಜೂರಾತಿ ನೀಡಲಾ ಗಿದೆ. ಹೆಜಮಾಡಿ ಬಂದರು ಅಭಿವೃದ್ಧಿಗೆ 34 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. 180.84 ಕೋ.ರೂ ವೆಚ್ಚದಲ್ಲಿ ಬಂದರು ಅಭಿವೃದ್ಧಿಗೆ ಸರಕಾರದಿಂದ ಅನುಮೋದನೆ ದೊರಕಿದೆ. ಮೀನುಗಾರಿಕೆಯ ಅಭಿವೃದ್ಧಿಗೆ ಸರಕಾರ ಬದ್ಧತೆ ತೋರಿದೆ. ಮತ್ಸಗಂಧಿ ಯೋಜನೆ 11 ಕಡೆ ಜಾರಿಯಾಗಿದೆ ಇನ್ನು ಕೆಲವೆಡೆ ಆಗಬೇಕಿದೆ ಎಂದರು. ನೇಕಾರರು, ರೈತರು ಸಹಿತ ಇನ್ನಿತರ ವಲಯಗಳಿಗೆ ನೀಡಿದಂತೆ ಮೀನುಗಾರ ಮಹಿಳೆಯರಿಗೆ ರಾಜ್ಯ ಸರಕಾರ ತಲಾ 50 ಸಾವಿರ ರೂ. ಸಾಲ ಮನ್ನಾ ನೀಡು ತ್ತಿದೆ. ಇದಕ್ಕಾಗಿ ಸರಕಾರ 60 ಕೋ.ರೂ. ಮೀಸಲಿರಿಸಿದೆ. ರಾಜ್ಯದಲ್ಲಿ 23 ಸಾವಿರ ಮೀನುಗಾರ ಮಹಿಳಾ ಫಲಾನುಭವಿ ಗಳಿದ್ದು, ಅದರಲ್ಲಿ 18ಸಾವಿರ ಮಹಿಳೆಯರು ಉಡುಪಿ ಜಿಲ್ಲೆಯವರೇ ಆಗಿದ್ದಾರೆ ಎಂದರು.
ಸಾಲ ಮನ್ನಾ ವಿಚಾರವಾಗಿ ಒಂದಷ್ಟು ಗೊಂದಲಗಳು ಏರ್ಪಟ್ಟಿದೆ. ಖಾತೆಗೆ ಹಣ ಜಮಾವಣೆ ವಿಚಾರವಾಗಿ ಇರುವ ಗೊಂದಲದಿಂದ ಸಮಸ್ಯೆಯಾಗಿದೆ. ಅದು ಶೀಘ್ರ ಬಗೆಹರಿಯಲಿದೆ. ಗೊಂದಲ ಬೇಡ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅಧಿಕಾರಿಗಳು ಮೀನುಗಾರ ಮಹಿಳೆಯರಿಗೆ ಸಾಲ ಮನ್ನಾ ವಿಚಾರದಲ್ಲಿ ಸತಾಯಿಸುತ್ತಿರುವುದು ಕಂಡು ಬರುತ್ತಿದೆ. ರಾಜ್ಯ ಮಟ್ಟದಲ್ಲಿ ಎಲ್ಲ ಬ್ಯಾಂಕ್ ಅಧಿಕಾರಿಗಳ ಸಭೆ ಶೀಘ್ರ ಕರೆದು ಸಮಸ್ಯೆ ನಿವಾರಿಸಲಾಗುವುದು ಎಂದರು. 4 ಸಾವಿರ ಮಂದಿಗೆ ಕ್ರೆಡಿಟ್ ಕಾರ್ಡ್ ವಿತರಣೆ
ಯಾಂತ್ರೀಕೃತ, ಕಿರುದೋಣಿಗಾರಿಕೆ ನಡೆಸುವ ಮೀನುಗಾರರಿಗೆ ಕೇಂದ್ರ ಸರಕಾರ ಕ್ರೆಡಿಟ್ ಕಾರ್ಡ್ ವಿತರಿಸುತ್ತಿದೆ. ಗರಿಷ್ಠ 3 ಲ.ರೂ. ಹಾಗೂ ಕನಿಷ್ಠ 2 ಲ.ರೂ. ವ್ಯವಹಾರ ನಡೆಸಲು ಅನುಕೂಲವಾಗಿದೆ. ರಾಜ್ಯದಲ್ಲಿ 28 ಸಾವಿರ ಮಂದಿ ಹಾಗೂ ಜಿಲ್ಲೆಯಲ್ಲಿ 4 ಸಾವಿರ ಮಂದಿ ಮೀನುಗಾರರಿಗೆ ಕಾರ್ಡ್ ವಿತರಿಸಲಾಗಿದೆ ಎಂದರು.
Related Articles
Advertisement