Advertisement

ಶ್ರೀನಿವಾಸ್‌ ಪ್ರಸಾದ್‌ ಸೋಲು ನಿಶ್ಚಿತ: ಸಿಎಂ

03:45 AM Feb 19, 2017 | Team Udayavani |

ಹಾಸನ: ನಂಜನಗೂಡು ಉಪ ಚುನಾವಣೆಯಲ್ಲಿ ಮಾಜಿ ಸಚಿವ ವಿ.ಶ್ರೀನಿವಾಸ್‌ ಪ್ರಸಾದ್‌ ಸೋಲು ನಿಶ್ಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸದಿಂದ ನುಡಿದರು. 

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂಜನಗೂಡು ಕ್ಷೇತ್ರದ ಮತಗಳು ಶ್ರೀನಿವಾಸ್‌ ಪ್ರಸಾದ್‌ ಜೇಬಿನಲ್ಲಿಲ್ಲ. ಅವರನ್ನು ಸೋಲಿಸದೆ ಬಿಡಲ್ಲ. ನಮ್ಮ ಪಕ್ಷದಲ್ಲಿ ಅಭ್ಯರ್ಥಿಗಳಿಲ್ಲ ಎಂದು ಕಳಲೆ ಕೇಶವಮೂರ್ತಿ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡಿಲ್ಲ. ಪಕ್ಷಕ್ಕೆ ಬರಿ¤àವಿ ಅಂದವರನ್ನು ಸೇರಿಸಿಕೊಳ್ತೀವಿ. ಕಾಂಗ್ರೆಸ್‌ ಪಕ್ಷಕ್ಕೆ ಅಭ್ಯರ್ಥಿಗಳ ದರ್ದಿಲ್ಲ ಎಂದರು. ಅತಿ ಹೆಚ್ಚು ಅಭ್ಯರ್ಥಿಗಳಿರುವುದು ಕಾಂಗ್ರೆಸ್‌ ಪಕ್ಷದಲ್ಲಿಯೇ. ಒಂದೊಂದು ಕ್ಷೇತ್ರದಲ್ಲಿ 5ರಿಂದ 6 ಅಭ್ಯರ್ಥಿಗಳಿದ್ದಾರೆ. ಆದರೆ, ಬೇರೆ ಪಕ್ಷಗಳಿಂದ ಬರಿ¤àವಿ ಎಂದರೆ ಬೇಡ ಎನ್ನಲ್ಲ. ಜೆಡಿಎಸ್‌ನವರು ಬೇರೆ ಪಕ್ಷದವರನ್ನು ಸೇರಿಸಿಕೊಳ್ಳಲ್ಲವಾ?  ವಿಷನ್‌-150 ಎಂದು ಹೇಳಿಕೊಂಡು ತಿರುಗುತ್ತಿರುವ ಬಿಜೆಪಿಯವರು ನಮ್ಮ ಪಕ್ಷದವರನ್ನು ಸೇರಿಕೊಂಡಿಲ್ಲವೇ ಎಂದು ಪ್ರಶ್ನಿಸಿದರು. 

ಕುಮಾರ್‌ ಬಂಗಾರಪ್ಪ ಪಕ್ಷ ಬಿಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರೂ ಕಾಂಗ್ರೆಸ್‌ ಬಿಡಲ್ಲ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೆ ಬಗೆಹರಿಸ್ತೀವಿ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next