Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಯಾವುದೇ ಸ್ಥಳದಲ್ಲಾದರೂ ಗಲಾಟೆಗಳು ನಡೆದರೆ, ಅನುಮಾನಸ್ಪದ ವ್ಯಕ್ತಿಗಳು ಕಾಣಿಸಿದರೇ ಸಾರ್ವಜನಿಕರು ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ನೀಡಿದರೆ ಸಾಕು ಪೊಲೀಸ್ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತ್ತರಾಗುತ್ತಾರೆ.
Related Articles
Advertisement
ಅನುಮಾನ ಬಂದ್ರೆ ಪೊಲೀಸ್ಗೆ ತಿಳಿಸಿ: ಒಂಟಿಮನೆ, ತೋಟದ ಮನೆಗಳಿಗೆ ಯಾರಾದರೂ ಅಪರಿಚಿತರು ಬಂದರೇ ಯಾವುದೇ ಕಾರಣಕ್ಕೂ ಮನೆ ಬಾಗಿಲು ತೆಗೆಯಬಾರದು. ಅನುಮಾನ ಬಂದ ಕೂಡಲೇ ಪೊಲೀಸ್ ಕಂಟ್ರೋಲ್ಗೆ ಕರೆ ಮಾಡಬೇಕು. ಇನ್ನು ಬೀದಿಗಳಲ್ಲಿ ಅನುಮಾನವಾಗಿ ಸುತ್ತಾಡುವವರ ಬಗ್ಗೆ ಅಲ್ಲಿನ ನಿವಾಸಿಗಳು ತಕ್ಷಣದಲ್ಲಿ ಪೊಲೀಸ್ಗೆ ಮಾಹಿತಿ ಕೊಡಬೇಕು.
ಹೊಸದಾಗಿ ಮನೆ ಬಾಡಿಗೆಗೆ, ಕೆಲಸಕ್ಕೆ ಮತ್ತು ತೋಟದ ಕೆಲಸಕ್ಕೆ ಬಂದು ಕೆಲಸದ ಸಮಯದಲ್ಲೆ ಪರಿಚಿತರಾದವರ ಬಗ್ಗೆ, ಕೆಲಸ ಇಲ್ಲದಿದ್ದಾಗಲೂ ಮನೆಗೆ ಬಂದರೇ ಎಚ್ಚರದಿಂದ ಇರಬೇಕು. ಮನೆ ಬಾಗಿಲನ್ನು ತೆಗೆಯದೇ ಮನೆ ಒಳಗಿನಿಂದಲೇ ಮಾತ ನಾಡಿ ಕಳುಸಬೇಕು. ಅನುಮಾನ ಬಂದರೇ ಪೊಲೀಸರಿಗೆ ತಿಳಿಸಬೇಕು ಎಂದು ಮನವಿ ಮಾಡಿದರು.
ಸಾರ್ವಜನಿಕರು ಸದಾ ಎಚ್ಚರದಿಂದಿರಬೇಕು:ಮದ್ಯಪಾನ ಮಾಡಿ ಗಲಾಟೆ ಮಾಡುವವರ ಬಗ್ಗೆ ಸಾರ್ವಜನಿಕರು ದೂರವಾಣಿ ಮೂಲಕ ಕರೆ ಮಾಡಿ ಮಾಹಿತಿ ನೀಡಿದರೂ ತಕ್ಷಣ ಪೊಲೀಸರು ಕ್ರಮ ಕೈಗೊಳ್ಳುವರು. ಮಾಹಿತಿ ನೀಡಿದವರ ವಿವರವನ್ನು ಯಾವ ಕಾರಣಕ್ಕೂ ಬಹಿರಂಗಪಡಿಸುವುದಿಲ್ಲ. ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಡಾಬಾ ಮತ್ತಿತರೆ ಕಡೆಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯುತ್ತಿದ್ದರೆ ಮಾಲೀಕರೇ ಪೊಲೀಸರಿಗೆ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಮಾಲೀಕರ ಮೇಲೂ ಪ್ರಕರಣ ದಾಖಲಿಸಲಾಗುವುದು ಮತ್ತು ಪರವಾನಿಗೆ ರದ್ದು ಮಾಡಲಾಗುವುದು . ಕೋವಿಡ್ ನಂತರದ ತಮ್ಮ ಪರಿಸರಕ್ಕೆ ಹೊಸದಾಗಿ ಬಂದಿರುವವರ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರಬೇಕು ಎಂದು ಎಸ್ಪಿ ಶ್ರೀನಿವಾಸ ಗೌಡ ಎಚ್ಚರಿಕೆ ನೀಡಿದರು.