Advertisement

ಸೋಂಕಿಲ್ಲವೆಂದು ಬಿಡುಗಡೆ ಮಾಡಿದ್ರು ವರದಿ ಬಂದ ನಂತ್ರ ಹೌಹಾರಿದರು!

06:36 PM May 31, 2020 | Team Udayavani |

ಶೃಂಗೇರಿ: ಮುಂಬೈಯಿಂದ ಪಟ್ಟಣಕ್ಕೆ ಬಂದು ಕ್ವಾರಂಟೈನ್‌ ಸೆಂಟರ್‌ನಲ್ಲಿ ಇದ್ದ ವ್ಯಕ್ತಿಯೊಬ್ಬ ಆರೋಗ್ಯ ಇಲಾಖೆ ಅಧಿಕಾರಿಗಳ ಯಡವಟ್ಟಿನಿಂದ ಗಂಟಲು ದ್ರವ ವರದಿ ಬರುವ ಮುನ್ನವೇ ಕ್ವಾರಂಟೈನ್‌ ಕೇಂದ್ರದಿಂದ ಬಿಡುಗಡೆಗೊಂಡಿದ್ದು, ಇದೀಗ ಈತನಿಗೆ ಕೋವಿಡ್ ಸೋಂಕು ತಗುಲಿರೋದು ದೃಢಪಟ್ಟಿದೆ.

Advertisement

ಮುಂಬೈನಿಂದ ಶೃಂಗೇರಿಗೆ ಆಗಮಿಸಿದ್ದ ವ್ಯಕ್ತಿಯನ್ನು ಪಟ್ಟಣ ಹೊರವಲಯದ ಸಚ್ಚಿದಾನಂದಪುರದ ಸಾಂಸ್ಥಿಕ ಕೇಂದ್ರದಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು. ಈತನ ರಕ್ತ ಹಾಗೂ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದರ ವರದಿ ಬರಬೇಕಿತ್ತು. ಈ ಮಧ್ಯೆ ವರದಿ ಜಿಲ್ಲಾಡಳಿತದ ಕೈ ಸೇರುವ ಮುನ್ನವೇ ವ್ಯಕ್ತಿಗೆ ಕೋವಿಡ್ ಸೋಂಕು ಇಲ್ಲ ಎಂದು ಅಧಿಕಾರಿಗಳು ಆತನನ್ನು ಬುಧವಾರವೇ ಬಿಡುಗಡೆಗೊಳಿಸಿದ್ದರು. ಆದರೆ ಗುರುವಾರ ಮಧ್ಯಾಹ್ನ ರಾಜ್ಯ ಆರೋಗ್ಯ ಸಚಿವಾಲಯ ದಿಂದ ಬಿಡುಗಡೆಗೊಂಡ ಸೋಂಕಿತರ ಪಟ್ಟಿಯಲ್ಲಿ ಈ ವ್ಯಕ್ತಿಗೆ ಸೋಂಕು ತಗುಲಿರೋದು ದೃಢಪಟ್ಟಿದೆ. ಕ್ವಾರಂಟೈನ್‌ ಕೇಂದ್ರದಿಂದ ಹೊರಬಂದ ವ್ಯಕ್ತಿ ಪಟ್ಟಣದಾದ್ಯಂತ ಓಡಾಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next