Advertisement

ಕನ್ನೆಪ್ಪಾಡಿ ಆಶ್ರಯ ಆಶ್ರಮಕ್ಕೆ ಶ್ರೀ ಸಚ್ಚಿದಾನಂದ ಭಾರತೀ ಭೇಟಿ

07:21 PM Sep 29, 2020 | mahesh |

ಕಾಸರಗೋಡು: ಶ್ರೀಮದ್‌ ಎಡನೀರು ಮಠಾಧೀಶರಾಗಿ ಪೀಠಾರೋಹಣಗೈಯ್ಯಲಿರುವ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳ ಕ್ಷೇತ್ರ ಪರ್ಯಟನೆಯ ಅಂಗವಾಗಿ ನೀರ್ಚಾಲು ಸಮೀಪದ ಕನ್ನೆಪ್ಪಾಡಿ ಶ್ರೀ ಆಶ್ರಯ ಅಶ್ರಮಕ್ಕೆ ಭೇಟಿ ನೀಡಿದರು.

Advertisement

ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳ 50ನೇ ಜನ್ಮದಿನದ ಸಂದರ್ಭ ಸಂಕಲ್ಪಿಸಿದಂತೆ ಆಶ್ರಯಕ್ಕೆ ನೀಡಲುದ್ದೇಶಿಸಿದ್ದ ರೂ. 25 ಸಾವಿರ ರೂ. ಗಳ ಚೆಕ್‌ನ್ನು ಆಶ್ರಯದ ಟ್ರಸ್ಟಿ ಗೋಪಾಲ ಚೆಟ್ಟಿಯಾರ್‌ ಅವರಿಗೆ ಹಸ್ತಾಂತರಿಸಲಾಯಿತು.
ಅ. 28 ರಂದು ಎಡನೀರು ಮಠದಲ್ಲಿ ನೆರವೇರಲಿರುವ ಪೀಠಾರೋಹಣ ಕಾರ್ಯಕ್ರಮಕ್ಕೆ$ ಸಜ್ಜನ ಧರ್ಮ ವಿಶ್ವಾಸಿಗಳು ಆಗಮಿಸಿ ಪಾಲ್ಗೊಳ್ಳಬೇಕೆಂದು ರವೀಶ ತಂತ್ರಿ ಕರೆನೀಡಿದರು.

ಆಶ್ರಮದ ಟ್ರಸ್ಟಿ ಗೋಪಾಲ ಚೆಟ್ಟಿಯಾರ್‌, ಗಣೇಶಕೃಷ್ಣ ಅಳಕ್ಕೆ, ಶಿವಶಂಕರ ಕೋರಿಕ್ಕಾರ್‌, ಸವಿತಾ ಟೀಚರ್‌, ಪ್ರಮುಖರಾದ ಶಂಕರ ಡಿ., ಕೃಷ್ಣ ಮಣಿಯಾಣಿ, ಪ್ರೇಮಾ ಕುಮಾರಿ, ರಮೇಶ ಕಳೇರಿ, ಬಾಲ ಸುಬ್ರಹ್ಮಣ್ಯ ಮಲ್ಲಡ್ಕ, ರಾಜೇಂದ್ರ ಕಲ್ಲೂರಾಯ, ರಾಘವೇಂದ್ರ ಕಲ್ಲೂರಾಯ, ಗೋಪಾಲಕೃಷ್ಣ ಅಡಿಗ ಉಪಸ್ಥಿತರಿದ್ದರು. ಆಶ್ರಯದ ಟ್ರಸ್ಟಿ ಶ್ರೀಕೃಷ್ಣ ಭಟ್‌ ಪುದುಕೋಳಿ ಪ್ರಾಸ್ತಾವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next