Advertisement

ಇಂದಿನಿಂದ ‘ಶ್ರೀರಂಗ’ದರ್ಶನ

09:21 AM Jul 22, 2022 | Team Udayavani |

ವೆಂಕಟ್‌ ಭಾರಧ್ವಾಜ್‌ ನಿರ್ದೇಶನದ “ಶ್ರೀರಂಗ’ ಚಿತ್ರ ಇಂದು ತೆರೆಕಾಣುತ್ತಿದೆ. ಕಾಮಿಡಿ ಜೊತೆಗೆ ಕ್ರೈಂ ಥ್ರಿಲ್ಲರ್‌ ಅಂಶಗಳನ್ನು ಒಳಗೊಂಡಿರುವ ಈ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿತ್ತು. ಇದು ಚಿತ್ರತಂಡಕ್ಕೆ ತಮ್ಮ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.

Advertisement

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ, ವೆಂಕಟ್‌ ಭಾರಧಾಜ್‌, “ಸಿನಿಮಾ ಅನ್ನೋದನ್ನು ಒಬ್ಬರ ಕೈಯಲ್ಲಿ ಮಾಡಲು ಆಗುವುದಿಲ್ಲ. ತಾಂತ್ರಿಕ ವರ್ಗ, ಕಲಾ ವರ್ಗ ಹೀಗೆ ಎಲ್ಲರೂ ಕೂಡಿದಾಗ ಮಾತ್ರ ಸಿನಿಮಾಗುತ್ತದೆ. ಚಿತ್ರಕ್ಕೆ ಶಂಕರ್ ರಾಮನ್‌ ಡೈಲಾಗ್‌ ಅದ್ಭುತವಾಗಿದೆ. ಚಿಕ್ಕ ಪಾತ್ರದಿಂದ ಹಿಡಿದು ದೊಡ್ಡ ಪಾತ್ರದವರೆಗೂ ಎಲ್ಲರೂ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನಾನು ಒಂದು ಪಾತ್ರ ಮಾಡಿದ್ದೇನೆ’ ಎನ್ನುತ್ತಾರೆ.

ಕಥೆಯ ಬಗ್ಗೆ ಮಾತನಾಡುವ ನಿರ್ದೇಶಕ ವೆಂಕಟ್‌, ಈಗಿನ ಫಾಸ್ಟ್‌ ಯುಗದಲ್ಲೂ ಹಳೇ ಕಾಲದ ಮೌಲ್ಯವನ್ನು ಕಾಪಾಡಿಕೊಂಡು ಹೋಗುವ ನಾಯಕ ಒಂದು ಕಡೆಯಾದರೆ ಮಾಡ್ರನ್‌ ಮಮ್ಮಿ ಮತ್ತೂಂದು ಕಡೆ. ತನ್ನ ಮಗನಿಗೆ ಹೆಣ್ಣು ಹುಡುಕಾಟ ನಡೆಸಲು ಹೋದಾಗ ನಡೆಯುವ ಪ್ರಸಂಗಗಳು ಸಿನಿಮಾದ ಹೈಲೈಟ್‌’ ಎನ್ನುವ ವೆಂಕಟ್‌, ಚಿತ್ರ ಎಲ್ಲರಿಗೂ ಇಷ್ಟವಾಗುವ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಚಿತ್ರದಲ್ಲಿ ನಾಯಕನಾಗಿ ಶಿನವ್‌, ನಾಯಕಿಯರಾಗಿ ರಚನಾ ರಾಯ್, ರೂಪ ರಾಯಪ್ಪ ಹಾಗೂ ವಂದನಾ ಶೆಟ್ಟಿ ನಟಿಸಿದ್ದು, ಉಳಿದಂತೆ ಗುರುರಾಜ್‌ ಹೊಸಕೋಟೆ, ಯಮುನಾ ಶ್ರೀನಿಧಿ, ಸಾಗರ್‌ ಜಯರಾಮ್, ಚಿಪ್ಸ್ ಬಾಬು, ಗಿರೀಶ್‌, ಮಣಿ ಮಾರನ್‌ ಅಭಿನಯಿಸಿದ್ದಾರೆ. ಇವರ ಜೊತೆಗೆ ಪುಟಾಣಿಗಳ ದಂಡೇ ಇದೆ. ಮಾಸ್ಟರ್‌ ಚಿರಾಯು ಚಕ್ರವರ್ತಿ, ತ್ರಿಧಾರ ಲಕ್ಷಣ್‌, ಪುಶ್ಕಲ್‌ ಪ್ರೀತ್‌, ರಜತ್‌ ರಿತಿಕ್‌, ಐಶಾನಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next