Advertisement

ಶ್ರೀ ನಾರಾಯಣಗುರು ಫ‌ಲಕ ಅನಾವರಣ

06:09 AM Mar 02, 2019 | |

ಬೆಂಗಳೂರು: ಬನ್ನೇರುಘಟ್ಟ ರಸ್ತೆಯ ಜೆ.ಡಿ.ಮರ ಜಂಕ್ಷನ್‌ಗೆ ಬ್ರಹ್ಮಶ್ರೀ ನಾರಾಯಣಗುರು ಜಂಕ್ಷನ್‌ ಎಂದು ಶುಕ್ರವಾರ ಮರುನಾಮಕರಣ ಮಾಡಲಾಯಿತು. ಬಿಬಿಎಂಪಿಯಿಂದ ನಿರ್ಮಿಸಿದ್ದ ಹೊಸ ನಾಮಫ‌ಲಕ ಅನಾವರಣಗೊಳಿಸಿ, ಬ್ರಹ್ಮಶ್ರೀ ನಾರಾಯಣಗುರು ಭಾವ ಚಿತ್ರಕ್ಕೆ ಪೂಜೆ ನೆರವೇರಿಸುವ ಮೂಲಕ ಮೇಯರ್‌ ಗಂಗಾಬಿಕೆ ಮಲ್ಲಿಕಾರ್ಜುನ ಅವರು  ಮರುನಾಮಕರಣ ಪ್ರಕ್ರಿಯೆ ನೆರವೇರಿಸಿದರು.

Advertisement

ನಂತರ ಮಾತನಾಡಿದ ಮೇಯರ್‌, ಈ ಪ್ರದೇಶದಲ್ಲಿ ವಾಸಿಸುವ ಬಿಲ್ಲವರು, ಈ ಜಂಕ್ಷನ್‌ಗೆ ನಾರಾಯಣ ಗುರು ಹೆಸರಿಡುವಂತೆ ಕೋರಿ 2017ರಲ್ಲೇ  ಬಿಬಿಎಂಪಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ನಂತರದ ದಿನಗಳಲ್ಲಿ ಒತ್ತಾಯ ಮಾಡಿಕೊಂಡು ಬಂದಿದ್ದಾರೆ. ಅವರ ಬೇಡಿಕೆಗೆ ಸ್ಪಂದಿಸಿದ್ದೇವೆ. ಎಲ್ಲರೂ ಒಂದೇ ಎಂದು ಸಾರಿದ ಬ್ರಹ್ಮಶ್ರೀ ನಾರಾಯಣಗುರು ನಮಗೆಲ್ಲರಿಗೂ ಆದರ್ಶ ಎಂದು ಹೇಳಿದರು. 

ಶಾಸಕಿ ಸೌಮ್ಯಾ ರೆಡ್ಡಿ, ಬಿಲ್ಲವ ಅಸೋಸಿಯೇಶನ್‌ ಅಧ್ಯಕ್ಷ ಎಂ.ವೇದಕುಮಾರ್‌, ಹಿರಿಯ ಉಪಾಧ್ಯಕ್ಷ ಎಂ.ರಮೇಶ್‌ ಬಂಗೇರ, ಉಪಾಧ್ಯಕ್ಷ ಕೇಶವ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ರತ್ನಾ ಜಯರಾಮ್‌, ಪಾಲಿಕೆ ಸದಸ್ಯರಾದ ಲಕ್ಷ್ಮೀ ನಟರಾಜ್‌, ಭಾಗ್ಯಲಕ್ಷ್ಮೀ ಮುರಳಿ, ಜಂಟಿ ಆಯುಕ್ತರಾದ ಡಾ.ಸೌಜನ್ಯಾ, ಕಾರ್ಯಕಾರಿ ಇಂಜಿನಿಯರ್‌ ಅಶೋಕ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next