Advertisement

ಶ್ರೀಲಂಕಾ ಪ್ರಧಾನಿ ಭೇಟಿ: ಭಿಗಿ ಭದ್ರತೆ

12:49 AM Jul 25, 2019 | Sriram |

ಉಡುಪಿ/ ಕುಂಬಳೆ: ಶ್ರೀಲಂಕಾ ಪ್ರಧಾನಿ ರೆನಿಲ್‌ ವಿಕ್ರಮೆ ಸಿಂಘೆ ಅವರು ಜು. 26ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಮತ್ತು ಜು. 27ರಂದು ಕುಂಬಳೆ ಸಮೀಪದ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಈ ಸಂದರ್ಭ ಸಾರ್ವಜನಿಕರ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ.

Advertisement

ಕೊಲ್ಲೂರಿನಲ್ಲಿ ಜು. 26ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಾರ್ವಜನಿಕ ಭೇಟಿಯನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶ ಹೊರಡಿಸಿದ್ದಾರೆ.

ಕುಮಾರಮಂಗಲದಲ್ಲಿ ಭದ್ರತೆ
ಕುರಿತಂತೆ ಕಾಸರಗೋಡು ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿಯವರು ಪ್ರತ್ಯೇಕ ಸಭೆಗಳನ್ನು ನಡೆಸಿದರು. ಕ್ಷೇತ್ರದಲ್ಲಿ ಜು. 27ರ ಬೆಳಗ್ಗೆ 7 ಗಂಟೆಯಿಂದ ಪ್ರಧಾನಿಯವರು ಮರಳುವ ತನಕ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಜ್ಯೋತಿಷ ರತ್ನ ಬೇಳ ಪದ್ಮನಾಭ ಶರ್ಮ ಇರಿಞಾಲಕುಡ ಅವರ ಮಾರ್ಗದರ್ಶನದ ಮೇರೆಗೆ ಆಗಮಿಸುವ ಶ್ರೀಲಂಕಾ ಪ್ರಧಾನಿ ಕುಮಾರ ಮಂಗಲಕ್ಕೆ ಭೇಟಿ ನಡೆಯಲಿದೆ. ಶ್ರೀಲಂಕಾ ಪ್ರಜೆಗಳ ಕ್ಷೇಮಕ್ಕಾಗಿ ವಿಶೇಷ ಸೇವೆಗಳನ್ನು ನೆರವೇರಿಸುವರು.

Advertisement

Udayavani is now on Telegram. Click here to join our channel and stay updated with the latest news.

Next