Advertisement

ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀದುರ್ಗಾ ಆದಿಶಕ್ತಿ ಕ್ಷೇತ;ನಿಧಿ ಕುಂಭ ಪ್ರತಿಷ್ಠಾಪನ ಮಹೋತ್ಸವ

04:10 PM Mar 27, 2024 | Team Udayavani |

ಉಡುಪಿ: ದೊಡ್ಡಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ನಿರ್ಮಾಣಗೊಳ್ಳಲಿರುವ ವೇದ ಮಾತೆ ಗಾಯತ್ರಿ ದೇವಿಯ ನೂತನ ಶಿಲಾಮಯ ಗುಡಿಗೆ ನಿಧಿ ಕುಂಭ ಪ್ರತಿಷ್ಠಾಪನ ಮಹೋತ್ಸವವು ಮಾ.28ರಂದು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನೆರವೇರಲಿದೆ.

Advertisement

ಆ ಪ್ರಯುಕ್ತ ಪ್ರತಿಷ್ಠ ಪೂರ್ವ ಪ್ರಾಯಶ್ಚಿತ್ತ ವಾಗಿ ರುದ್ರ ಯಾಗ ಹಾಗೂ ಮಾ. 30ರಂದು ಗಾಯತ್ರಿ ಮಹಾಯಾಗ ನಡೆಯಲಿದೆ. ಈ ಕುಂಭದಲ್ಲಿ ಕ್ಷೇತ್ರದ ಭಕ್ತರು ಚಿನ್ನ, ಬೆಳ್ಳಿ, ನವರತ್ನ ಮುಂತಾದ ದ್ರವ್ಯಗಳನ್ನು ಸಮರ್ಪಿಸಲು ಮುಕ್ತ ಅವಕಾಶವಿದೆ ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next