Advertisement

ಕೋವಿಡ್ 19: ವಾಟ್ಸಾಪ್ ನಲ್ಲಿ ಸುಳ್ಳು ಸುದ್ದಿ ಹರಿಬಿಟ್ಟ ಇಬ್ಬರು ಯುವಕರ ಬಂಧನ

09:45 AM Mar 20, 2020 | keerthan |

ಬೀದರ್: ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ಕೋವಿಡ್-19 ವೈರಸ್ ಸೋಂಕಿತ  ವ್ಯಕ್ತಿ ಪರಾರಿಯಾಗಿದ್ದಾನೆ ಎಂದು ಸುಳ್ಳು ಸುದ್ದಿಯನ್ನು ವಾಟ್ಸಾಪ್ ಗ್ರೂಪ್ ನಲ್ಲಿ ಹರಿಬಿಟ್ಟ ಇಬ್ಬರು ಯುವಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.

Advertisement

‘ಬೀದರ್ ಗ್ರೂಪ್’ ಎಂಬ ವಾಟ್ಸಾಪ್ ಗ್ರೂಪ್ ನಲ್ಲಿ ಅಹಮದ್ ಮೂಜಿಬುದ್ದಿನ್  ಮತ್ತು ‘ಬೀದರ್ ಲೇಟೆಸ್ಟ್ ನ್ಯೂಸ್” ಗ್ರೂಪ್ ನಲ್ಲಿ ಮೊಹಮ್ಮದ್ ಅರ್ಷದ್ ಎಂಬುವರು ಸುಳ್ಳು ಸಂದೇಶ ಹಾಕಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿ ಸುಳ್ಳು ಸಂದೇಶ  ಹರಿಬಿಟ್ಟಿದ್ದಾರೆ ಎಂದು ಸೆಕ್ಷನ್ 505 (1)(ಬಿ) ಐಪಿಸಿ ಅಡಿಯಲ್ಲಿ ಪ್ರಕರಣ ವನ್ನು ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next