Advertisement

Ankola; ಕ್ರೀಡಾಪಟು ಅನಿಲ ರಾಮಚಂದ್ರ ಗಾಂವಕರ ಹೃದಯಾಘಾತದಿಂದ ನಿಧನ

09:09 PM Aug 06, 2023 | Team Udayavani |

ಅಂಕೋಲಾ : ಉತ್ತಮ ಕ್ರೀಡಾಪಟು ಆಗಿದ್ದ ಪೂಜಗೇರಿಯ ಅನಿಲ ರಾಮಚಂದ್ರ ಗಾಂವಕರ ಹೃದಯಾಘಾತದಿಂದ ರವಿವಾರ ಅಕಾಲಿಕವಾಗಿ ನಿಧನರಾಗಿದ್ದಾರೆ.

Advertisement

ಅನಿಲ ಅವರು ತಾಲೂಕಿನಲ್ಲಿ ಅನೇಕ‌ ಕ್ರಿಕೆಟ್ ಪಂದ್ಯಾವಳಿ ಸಂಗಟಿಸುವುದರ ಮೂಲಕ, ಕ್ರೀಡೆ , ಸಾಂಸ್ಕೃತಿಕ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿದ್ದರು.

ಶನಿವಾರ ಇವರಿಗೆ ಆರೋಗ್ಯದಲ್ಲಿ ಏರು ಪೇರಾಗಿ, ಉಸಿರಾಟ ಮತ್ತಿತರ ಸಮಸ್ಯೆ ಕಾಣಿಸಿಕೊಂಡು, ಖಾಸಗಿ ಆಸ್ಪತ್ರೆಗೆ ದಾಖಲಿಸಿ, ರವಿವಾರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯುವ ಸಿದ್ಧತೆ ನಡೆಸುತ್ತಿರುವಾಗಲೇ, ಆಸ್ಪತ್ರೆಯಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಈ ಸುದ್ದಿ ತಿಳಿದ ಪೂಜಗೇರಿ ಗ್ರಾಮಸ್ಥರು ಮತ್ತು ತಾಲೂಕಿನ ಹಲವರು ಆಸ್ಪತ್ರೆಯತ್ತ ಆಗಮಿಸಿದ್ದರು. ಮೃತ ಅನಿಲ ಗಾಂವಕರ, ತಾಯಿ ಸೇವಂತಿ ಗಾಂವಕರ ಹಾಗೂ ಸಹೋದರರಾದ ಕೃಷ್ಣ ಗಾಂವಕರ ಮತ್ತು ಪ್ರಭಾಕರ ಗಾಂವಕರ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next