Advertisement

ನಾಲ್ಕು ವಿಶ್ವಕಪ್‌ಗಳಲ್ಲಿ ಪಾಲ್ಗೊಳ್ಳಲು ಭವಾನಿಗೆ ಕೇಂದ್ರ ಆರ್ಥಿಕ ನೆರವು

09:04 PM Dec 25, 2021 | Team Udayavani |

ನವದೆಹಲಿ: ಮುಂದಿನ ವರ್ಷ ನಡೆಯುವ ನಾಲ್ಕು ಪ್ರಮುಖ ಅಂತಾರಾಷ್ಟ್ರೀಯ ಕತ್ತಿವರಸೆ ಕೂಟಗಳಲ್ಲಿ ಪಾಲ್ಗೊಳ್ಳಲು ಭವಾನಿ ದೇವಿಗೆ ಕೇಂದ್ರ ಸರ್ಕಾರದ ಆರ್ಥಿಕ ನೆರವು ದೊರಕಿದೆ.

Advertisement

ತರಬೇತಿ ಮತ್ತು ಸ್ಪರ್ಧೆಯ ವಾರ್ಷಿಕ ಯೋಜನೆಯಡಿ ಕೇಂದ್ರ ಸರ್ಕಾರ 8.16 ಲಕ್ಷ ರೂ. ಮೊತ್ತವನ್ನು ಮಂಜೂರು ಮಾಡಿದೆ. ಈ ಆರ್ಥಿಕ ನೆರವಿನಿಂದ ಭವಾನಿ ಅವರು ಜಾರ್ಜಿಯಾದಲ್ಲಿ ಜ.4ರಿಂದ ತರಬೇತಿ ಆರಂಭಿಸಲಿದ್ದಾರೆ. ಅದಾದ ನಂತರ ಜ.14ರಿಂದ 16ವರೆಗೆ ಜಾರ್ಜಿಯಾದ ಟಿಬಿಲಿಸಿಯಲ್ಲಿ ಕತ್ತಿವರಸೆ ವಿಶ್ವಕಪ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ಜ.28-29ರಂದು ಬಲ್ಗೇರಿಯದ ಪ್ಲಾವ್ಡೀವ್‌ನಲ್ಲಿ ನಡೆಯುವ ವಿಶ್ವಕಪ್‌ ಭಾಗವಹಿಸಲಿದ್ದಾರೆ, ಹಾಗೆಯೇ ಗ್ರೀಸ್‌, ಬೆಲ್ಜಿಯಂಗಳಲ್ಲಿ ನಡೆಯುವ ವಿಶ್ವಕಪ್‌ಗ್ಳಲ್ಲೂ ಸ್ಪರ್ಧಿಸಲಿದ್ದಾರೆ. ಈ ವರ್ಷ ಟೋಕ್ಯೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭವಾನಿ ಸ್ಪರ್ಧಿಸಿ, ಅಲ್ಲಿ 32ರ ಸುತ್ತಿನಲ್ಲಿ ಸೋತಿದ್ದರು. ಅವರು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಭಾರತದ ಮೊದಲ ಕತ್ತಿವರಸೆ ಸ್ಪರ್ಧಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next