Advertisement

ಸುಶಾಂತ್‌ ಸಿಂಗ್‌ ಅಗಲಿಕೆಗೆ ಕ್ರೀಡಾ ವಲಯದ ಸಂತಾಪ

09:21 PM Jun 14, 2020 | Sriram |

ಮುಂಬಯಿ: “ರೀಲ್‌ ಧೋನಿ’ ಸುಶಾಂತ್‌ ಸಿಂಗ್‌ ರಜಪೂತ್‌ ಅಗಲಿಕೆಗೆ “ರಿಯಲ್‌ ಧೋನಿ’ ಸೇರಿದಂತೆ ಕ್ರೀಡಾವಲಯ ಭಾರೀ ಆಘಾತ ಕ್ಕೊಳಗಾಗಿದೆ.

Advertisement

“ಸುಶಾಂತ್‌ ಸಿಂಗ್‌ ಅವರ ಈ ಸಾವನ್ನು ನಂಬಲಾಗುತ್ತಿಲ್ಲ. ಬಹಳ ನೋವಾಗಿದೆ. ಅವರ ನಟನೆಯನ್ನು ಕಂಡ ನಾನು, ನೀವು ರಣಜಿ ಟ್ರೋಫಿಯಲ್ಲಿ ಆಡಬಹುದು ಎಂದಿದ್ದೆ. ನಟನ ಆತ್ಮಕ್ಕೆ ಶಾಂತಿ ಸಿಗಲಿ’ ಎಂಬುದಾಗಿ ಧೋನಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

“ಬಹಳ ದುಃಖವಾಗಿದೆ. ಈ ಆಘಾತದಿಂದ ಹೊರಗೆ ಬರುವುದಾದರೂ ಹೇಗೆ?’ ಎಂದು ಧೋನಿ ಚಿತ್ರಕ್ಕಾಗಿ ಸುಶಾಂತ್‌ ಅವರನ್ನು ತರಬೇತುಗೊಳಿಸಿದ ಮಾಜಿ ಸ್ಟಂಪರ್‌ ಕಿರಣ್‌ ಮೋರೆ ಪ್ರತಿಕ್ರಿಯಿಸಿದ್ದಾರೆ.

“ಬಹಳ ಆಘಾತವಾಗಿದೆ. ಇದನ್ನು ಅರಗಿಸಿಕೊಳ್ಳಲು ಬಹಳ ಕಷ್ಟವಾಗುತ್ತಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಕ್ಕೆ ಈ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ನೀಡಲಿ’ ಎಂದು ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಶೋಕ ವ್ಯಕ್ತಪಡಿಸಿದ್ದಾರೆ.

“ಇದನ್ನು ನಂಬಲಾಗುತ್ತಿಲ್ಲ. ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ’ ಎಂದು ಶಿಖರ್‌ ಧವನ್‌ ಟ್ವೀಟ್‌ ಮಾಡಿದ್ದಾರೆ. ಸ್ಪಿನ್ನರ್‌ ಆರ್‌. ಅಶ್ವಿ‌ನ್‌, ಬಾಕ್ಸರ್‌ ವಿಜೇಂದರ್‌ ಸಿಂಗ್‌, ವೀಕ್ಷಕ ವಿವರಣಕಾರ ಹರ್ಷ ಭೋಗ್ಲೆ ಮೊದಲಾದವರೆಲ್ಲ ಸುಶಾಂತ್‌ ಸಿಂಗ್‌ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next