Advertisement

ಶ್ರೀಕ್ಷೇತ್ರ ನಿಟಿಲಾಪುರ: ಪಾದುಕಾನ್ಯಾಸ

02:45 AM Jul 14, 2017 | Team Udayavani |

ಬಂಟ್ವಾಳ: ಗೋಳ್ತಮಜಲು ಗ್ರಾಮ ಶ್ರೀಕ್ಷೇತ್ರ ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ ನೂತನ ಶಿಲಾಮಯ ಗರ್ಭಗುಡಿಯ ಪಾದುಕಾನ್ಯಾಸವನ್ನು ಜಿಲ್ಲಾ ಉಸ್ತುವಾರಿ ಸಚಿವರು, ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಗೌರವ ಅಧ್ಯಕ್ಷ ಬಿ. ರಮಾನಾಥ ರೈ ಜು. 12ರಂದು ನೆರವೇರಿಸಿದರು.

Advertisement

ಕ್ಷೇತ್ರದ ತಂತ್ರಿಯಾದ ಬ್ರಹ್ಮಶ್ರೀ ವೇ|ಮೂ| ನಿಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು, ವಾಸ್ತುಶಿಲ್ಪಿ ಬೆದ್ರಡ್ಕ ರಮೇಶ ಕಾರಂತ, ಪ್ರಧಾನ ಅರ್ಚಕ ನಾರಾಯಣ ರಾವ್‌ ಕಾರಂತ ಪಾದುಕಾನ್ಯಾಸ ಪೂರ್ವದ ಧಾರ್ಮಿಕ ,ವೈದಿಕ ವಿಧಿಗಳನ್ನು ನೆರವೇರಿಸಿದರು.

ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಅಶೋಕ್‌ ಕುಮಾರ್‌ ಬರಿಮಾರು, ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಬಿ. ಪದ್ಮಶೇಖರ ಜೈನ್‌, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್‌, ಪ್ರಮುಖರಾದ ಸಂಪತ್‌ ಕುಮಾರ್‌ ಶೆಟ್ಟಿ, ಸಂದೀಪ್‌ ಕುಮಾರ್‌ ಶೆಟ್ಟಿ ಅರೆಬೆಟ್ಟು, ಸಮಿತಿ ಸದಸ್ಯರಾದ ರಾಮಚಂದ್ರ ಬನ್ನಿಂತಾಯ, ದೇವದಾಸ ಪೂಜಾರಿ ಅಡ್ಯನಡ್ಕ, ಕೆ. ಪದ್ಮನಾಭ ರೈ, ಕೃಷ್ಣಪ್ಪ ಮೂಲ್ಯ, ದಿನೇಶ್‌ ಶೆಣೈ, ಬಟ್ಯಪ್ಪ ಶೆಟ್ಟಿ ನಿಟಿಲಾಪುರ, ಗಣೇಶ್‌ ಶೆಟ್ಟಿ ಗೋಳ್ತಮಜಲು, ಗಣೇಶ್‌ ನಾಯ್ಕ, ವಸಂತ ಎನ್‌. ಹೇಮಲತಾ ಗಟ್ಟಿ, ಬಾಲಪ್ಪ ಗೌಡ, ಸೀಮೆಯ ಭಕ್ತರು, ಗ್ರಾಮ, ಕ್ಷೇತ್ರ ಸಮಿತಿ ಸದಸ್ಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next