Advertisement

ಹೊರಗಿನಿಂದ ಬಂದವರ ಮೇಲೆ ವಿಶೇಷ ನಿಗಾ

06:08 PM Mar 29, 2020 | Sriram |

ಅಜೆಕಾರು: ಅಜೆಕಾರು, ಬೈಲೂರು ಭಾಗಗಳಲ್ಲಿ ವಿದೇಶ, ಹೊರ ಜಿಲ್ಲೆ, ಹೊರ ರಾಜ್ಯದಿಂದ ಬಂದವರ ಮೇಲೆ ಅಧಿಕಾರಿಗಳು ವಿಶೇಷ ನಿಗಾ ಇಟ್ಟಿದ್ದಾರೆ.

Advertisement

ಪ್ರತಿ ದಿನ ಗ್ರಾಮ ಪಂಚಾಯತ್‌, ಪ್ರಾಥಮಿಕ ಆರೋಗ್ಯ ಕೇಂದ್ರ, ಕಂದಾಯ, ಪೊಲೀಸ್‌ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಮನೆಯಿಂದ ಹೊರಬಾರದಂತೆ ಸೂಚಿಸುತ್ತಿದ್ದಾರೆ. ಇವರ ಜತೆಗೆ ಆಶಾ ಕಾರ್ಯಕರ್ತರು, ವಿವಿಧ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸುತ್ತಿದ್ದಾರೆ.

ವಿದೇಶದಿಂದ ಬಂದ ವ್ಯಕ್ತಿಗಳ ಜತೆ ಹೊರ ರಾಜ್ಯ, ಜಿಲ್ಲೆಯಿಂದ ಬಂದ ವ್ಯಕ್ತಿಗಳ ಮೇಲೂ ತೀವ್ರ ನಿಗಾ ಇಟ್ಟಿರುವ ಅಧಿಕಾರಿಗಳು ಯಾವುದೇ ಕಾರಣಕ್ಕೆ ಮನೆಯಿಂದ ಹೊರ ಬಾರದಂತೆ ಸೂಚಿಸುತ್ತಿದ್ದಾರೆ.

ಧ್ವನಿ ವರ್ಧಕ ಮೂಲಕ ಎಚ್ಚರಿಕೆ: ವರಂಗ ಗ್ರಾಮ ಪಂಚಾಯತ್‌ ಸಿಬ್ಬಂದಿಯವರು ಮಾ.28ರಂದು ಪಂಚಾಯತ್‌ ವ್ಯಾಪ್ತಿಯ ಪ್ರತಿಯೊಂದು ಪ್ರದೇಶಗಳಿಗೆ ತೆರಳಿ ಧ್ವನಿವರ್ಧಕದ ಮೂಲಕ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಮರ್ಣೆ, ಹಿರ್ಗಾನ, ವರಂಗ, ಕಡ್ತಲ, ನೀರೆ, ಯರ್ಲಪಾಡಿ, ಶಿರ್ಲಾಲು,ಕೆರ್ವಾಶೆ, ಬೈಲೂರು ಪಂಚಾಯತ್‌ ಸಿಬಂದಿಯವರು ಮನೆ ಮನೆಗೆ ಪ್ರತಿ ನಿತ್ಯ ತೆರಳಿ ಮಾಹಿತಿ ನೀಡುವ ಜತೆಗೆ ಮುಂಜಾಗ್ರತಾ ಕ್ರಮದ ಬಗ್ಗೆ ಹೇಳುತ್ತಿದ್ದಾರೆ.

Advertisement

ಕೂಲಿ ಕಾರ್ಮಿಕರ ಮೇಲೆ ನಿಗಾ: ಬೈಲೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಉತ್ತರ ಪ್ರದೇಶದಿಂದ ಬಂದ ಸುಮಾರು 75 ಕೂಲಿ ಕಾರ್ಮಿಕರು ಹಾಗೂ ಹಾವೇರಿ ಜಿಲ್ಲೆಯಿಂದ ಬಂದ 42 ಕೂಲಿ ಕಾರ್ಮಿಕರ ಮೇಲೆ ಪಂಚಾಯತ್‌ ಆಡಳಿತ ನಿಗಾ ಇಟ್ಟಿದೆ. ಹಾವೇರಿ ಜಿಲ್ಲೆಯಿಂದ ಬಂದ ಕಾರ್ಮಿಕರು ಮಾ.27ರ ರಾತ್ರಿ ಹಾವೇರಿಗೆ ಹಿಂರುರುಗಲು ವಾಹನದಲ್ಲಿ ಹೊರಟ್ಟಿದ್ದರಾದರೂ ಮಾರ್ಗ ಮಧ್ಯೆ ಪೊಲೀಸರಿಗೆ ಸಿಕ್ಕಿ ಬಿದ್ದು ಮತ್ತೆ ಬೈಲೂರಿಗೆ ಬಂದಿದ್ದಾರೆ. ಅಜೆಕಾರು, ಬೈಲೂರು ಭಾಗಗಳಲ್ಲಿ ಜನರು ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದು ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಪೇಟೆಗೆ ಜನರು ಬಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next