Advertisement

 ಗಣೇಶೋತ್ಸವಕ್ಕೆ ವಿಶೇಷ ರೈಲು; ಸಂಸದ ಗೋಪಾಲ್‌ ಶೆಟ್ಟಿಗೆ ಅಭಿನಂದನೆ

03:19 PM Aug 01, 2018 | |

ಮುಂಬಯಿ: ಪಶ್ಚಿಮ ಉಪನಗರದ ತುಳು-ಕನ್ನಡಿಗರ ಸುದೀರ್ಘ‌ ಕಾಲದ ಬೇಡಿಕೆ ಯಾಗಿರುವ ಪಶ್ಚಿಮ ರೈಲ್ವೇ ಮಾರ್ಗವಾಗಿ ವಸಾಯಿ ಮೂಲಕ ಮಂಗಳೂರಿಗೆ ರೈಲೊಂದನ್ನು ಪ್ರಾರಂಭಿಸುವ ಬಗ್ಗೆ ರೈಲ್ವೇ ಇಲಾಖೆ ಹಾಗೂ ರೈಲ್ವೇ ಸಚಿವರಿಗೆ ಹಲವಾರು ಬಾರಿ ಮನವಿಯನ್ನು ಸಲ್ಲಿಸಿದ ಬಳಿಕ ಪ್ರಸ್ತುತ ತಾತ್ಕಾಲಿಕವಾಗಿ ಮುಂಬಯಿ ಸೆಂಟ್ರಲ್‌ ಮತ್ತು ಬಾಂದ್ರಾ ಟರ್ಮಿನಸ್‌ನಿಂದ ಗಣಪತಿ ಉತ್ಸವದ ಅಂಗವಾಗಿ ವಿಶೇಷ ರೈಲುಗಳನ್ನು ಓಡಿಸುವಂತೆ ರೈಲ್ವೇ ಇಲಾಖೆ ನಿರ್ಧರಿಸಿದ್ದು, ಈ ಬೇಡಿಕೆಯಲ್ಲಿ ರೈಲ್ವೇ ಯಾತ್ರಿ ಸೇವಾ ಸಂಘ ಬೊರಿವಲಿ ಕಳೆದ ಹಲವಾರು ವರ್ಷಗಳಿಂದ ಕಾರ್ಯಪ್ರವೃತ್ತವಾಗಿದ್ದು, ಹಲವಾರು ಬಾರಿ ಲೋಕಸಭಾ ಸದಸ್ಯ ಗೋಪಾಲ ಶೆಟ್ಟಿ ಅವರನ್ನು ಒತ್ತಾಯಿಸಲಾಗಿದ್ದು.

Advertisement

ಇತ್ತೀಚೆಗೆ ಬೊರಿವಲಿಯಲ್ಲಿ ರೈಲ್ವೇ ಇಲಾಖೆಯ ವತಿಯಿಂದ ರೈಲ್ವೇ ನಿಲ್ದಾಣದ ಪಶ್ಚಿಮದಲ್ಲಿ ಮೋಟಾರ್‌ ಸೈಕಲ್‌ಗ‌ಳ ಪಾರ್ಕಿಂಗ್‌ ವ್ಯವಸ್ಥೆಯನ್ನು ಉದ್ಘಾಟಿಸಿದ್ದು, ಈ ಸಂದರ್ಭದಲ್ಲಿ ಬೊರಿವಲಿ ರೈಲ್ವೇ ಯಾತ್ರಿ ಸೇವಾ ಸಂಘದ ಸಮಿತಿಯ ಉಪಾಧ್ಯಕ್ಷ ಪ್ರೇಮನಾಥ್‌ ಕೋಟ್ಯಾನ್‌, ಜತೆ ಕಾರ್ಯದರ್ಶಿ ರಜಿತ್‌ ಸುವರ್ಣ ಹಾಗೂ ಇತರ ಪದಾಧಿಕಾರಿಗಳು, ಸದಸ್ಯರು ಗೋಪಾಲ್‌ ಶೆಟ್ಟಿ ಅವರನ್ನು ಪುಷ್ಪಗುತ್ಛವನ್ನಿತ್ತು ಅಭಿನಂದಿಸಿದರು. 

ಚಿತ್ರ-ವರದಿ : ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next