Advertisement

ವೈದ್ಯರ ಭರ್ತಿಗೆ ವಿಶೇಷ ನೇಮಕಾತಿ ನಿಯಮ

10:54 AM Mar 21, 2017 | Team Udayavani |

ವಿಧಾನಪರಿಷತ್ತು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿಯಿರುವ 1,065 ತಜ್ಞರು ಹಾಗೂ 365 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗಳನ್ನು ಕೆಪಿಎಸ್‌ಸಿ ಮೂಲಕ ಭರ್ತಿ ಮಾಡಲು ವಿಶೇಷ ನೇಮಕಾತಿ ನಿಯಮ ರೂಪಿಸಲಾಗುವುದು ಎಂದು ಆರೋಗ್ಯ ಸಚಿವ ರಮೇಶ್‌ಕುಮಾರ್‌ ತಿಳಿಸಿದ್ದಾರೆ.

Advertisement

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಎನ್‌.ಎಸ್‌.ಬೋಸರಾಜು ಪ್ರಶ್ನೆಗೆ ಉತ್ತರಿಸಿದ ಅವರು, “2015-16ನೇ ಸಾಲಿನಲ್ಲಿ ಕೆಪಿಎಸ್‌ಸಿಯಿಂದ ನಡೆದ ನೇಮಕಾತಿಯಲ್ಲಿ ಆಯ್ಕೆಯಾದ 713 ತಜ್ಞ ವೈದ್ಯರಲ್ಲಿ 252 ತಜ್ಞರು, 324 ವೈದ್ಯಾಧಿಕಾರಿಗಳಲ್ಲಿ 256 ಹಾಗೂ 85 ದಂತ ವೈದ್ಯರಲ್ಲಿ 83 ದಂತ ಆರೋಗ್ಯಾಧಿಕಾರಿಗಳು ಕರ್ತವ್ಯಕ್ಕೆ
ಹಾಜರಾಗಿದ್ದಾರೆ. ತಮಗೆ ಅನುಕೂಲವಾದ ಸ್ಥಳಕ್ಕೆ ನಿಯೋಜಿಸಿದರಷ್ಟೇ ಸೇವೆಗೆ ಬರುತ್ತಿರುವುದರಿಂದ ಕೊರತೆ ತಲೆದೋರಿದೆ.

ಹೀಗಾಗಿ, ವಿಶೇಷ ನೇಮಕಾತಿಗೆ ನಿಯಮ ರೂಪಿಸಲಾಗುತ್ತಿದೆ’ ಎಂದು ಹೇಳಿದರು. ಹೈದರಾಬಾದ್‌ -ಕರ್ನಾಟಕ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ತಜ್ಞರಿಗೆ 1.25 ಲಕ್ಷ ರೂ. ವೇತನ ನೀಡಿದರೂ ಯಾರೂ ಬರುತ್ತಿಲ್ಲ. ಹಾಗಾಗಿ 11 ಸರ್ಕಾರಿ ಜಿಲ್ಲಾ ಆಸ್ಪತ್ರೆಗಳಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ ಆರಂಭಿಸಲಾಗುವುದು. ಹಾಗೆಯೇ ಅಗತ್ಯವಿರುವ ಕಡೆ ವಿಸ್ತರಿಸಿದ ಆಸ್ಪತ್ರೆಗಳನ್ನು ತೆರೆಯಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

ರಾಯಚೂರು ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಆರು ಸಾಮಾನ್ಯ ಕರ್ತವ್ಯ
ವೈದ್ಯಾಧಿಕಾರಿ ಹುದ್ದೆ ಖಾಲಿಯಿದ್ದು, ಶನಿವಾರದೊಳಗೆ ಭರ್ತಿ ಮಾಡಲಾಗುವುದು. ತಾಲೂಕು ಆಸ್ಪತ್ರೆಗಳಲ್ಲಿ 22 ತಜ್ಞ ವೈದ್ಯರ ಕೊರತೆಯಿದ್ದು, ಶೀಘ್ರ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ಹೈದರಾಬಾದ್‌ ಕರ್ನಾಟಕ ಭಾಗದ ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯವಿರುವ ವೈದ್ಯರು, ತಜ್ಞರ ನಿಯೋಜನೆಗೆ ಎರಡು ತಿಂಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next