Advertisement

ದಡ ದಾಟಿಸಿದ ಆ ಇಪ್ಪತ್ತು ರೂಪಾಯಿ!

07:06 PM Apr 08, 2019 | Hari Prasad |

ಅಂದು ಬಳ್ಳಾರಿಯಿಂದ ತುಮಕೂರಿಗೆ ಪ್ರಯಾಣ ಬೆಳೆಸಿದ್ದೆ. ರಾತ್ರಿ 8 ಗಂಟೆಗೆ, ತುಮಕೂರಿನ ಹೈವೇಯಲ್ಲಿ ಬಸ್ಸಿನಿಂದ ಇಳಿದೆ. ಕೂಡಲೇ ನನ್ನ ಗೆಳೆಯ ರಾಮುಗೆ ಫೋನ್‌ ಮಾಡಿದೆ… “ಬಸ್‌ ಇಳಿದಿದ್ದೀನಿ. ಇಲ್ಲಿಗೆ ಬೈಕ್‌ ತಗೊಂಡು ಬಾರೋ’ ಅಂದೆ. ಪಾಪ, ಅವನು ಹೊರಟ. ಆದರೆ, ಹತ್ತೇ ನಿಮಿಷದಲ್ಲಿ ವಾಪಸು ಕರೆ ಮಾಡಿದ್ದ… “ಇಲ್ಲಾ ಮಚ್ಚಾ… ಇಲ್ಲಿ ಪೋಲಿಸರು ಇದ್ದಾರೆ. ಇನ್ನೊಂದು ಹೆಲ್ಮೆಟ್‌ ತಂದಿಲ್ಲ. ಬೈಕ್‌ ಹಿಡಿಯಬಹುದು. ನೀನೇ ಬಸ್‌ಸ್ಟಾಂಡ್‌ಗೆ ಬಂದು ಬಿಡು’ ಅಂದ.

Advertisement

ನಾನು, “ಸರಿ’ ಅಂತೇಳಿ ಒಪ್ಪಿಕೊಂಡೆ. ಆದರೆ, ಪರ್ಸ್‌ ತೆಗೆದು ನೋಡ್ತೀನಿ, ಅದರಲ್ಲಿ ದುಡ್ಡೇ ಇರಲಿಲ್ಲ. ನಡೆದೇ ಹೋಗೋದಾದ್ರೆ, ಐದಾರು ಕಿ.ಮೀ. ಆಗುತ್ತೆ. ತೂಕದ ಲಗ್ಗೇಜ್‌ ಬೇರೆ ಇದೆ. ಏನು ಮಾಡೋದು ಅಂತಲೇ ತೋಚಲಿಲ್ಲ. ಪಕ್ಕದಲ್ಲಿ, ನನ್ನೊಂದಿಗೆ ಬಸ್‌ ಇಳಿದಿದ್ದ ವ್ಯಕ್ತಿ ಕಾಣಿಸಿದರು. “ಸರ್‌, ಬೇಜಾರು ಮಾಡ್ಕೋಬೇಡಿ. ಒಂದಿಪ್ಪತ್ತು ರೂಪಾಯಿ ಇದ್ದರೆ ಕೊಡ್ತೀರಾ? ಬಸ್‌ಸ್ಟಾಂಡ್‌ಗೆ ಹೋಗೋಕೆ ದುಡ್ಡಿಲ್ಲ’ ಎಂದು, ನನ್ನ ಸಂಕಷ್ಟ ಹೇಳಿಕೊಂಡೆ. ಆ ಪುಣ್ಯಾತ್ಮ ಮರುಮಾತಾಡದೇ, ಆಟೋಗೆ ದುಡ್ಡು ಕೊಟ್ಟು ನನ್ನನ್ನು ಕಳುಹಿಸಿದರು. ಅಲ್ಲಿಯೇ ಅವರಿಗೊಂದು ಥ್ಯಾಂಕ್ಸ್‌ ಹೇಳಿ ಬಂದೆ.
— ಮೈಲಾರಿ ಸಿಂಧುವಾಳ, ತುಮಕೂರು

ಪರಿಚಿತ ಅಲ್ಲದ ಒಬ್ಬ ವ್ಯಕ್ತಿ, ನಿಮ್ಮ ಬದುಕಿನೊಳಗೆ ಒಂದು ಕ್ಷಣದ ಮಟ್ಟಿಗೆ, ಕೆಲ ನಿಮಿಷಗಳ ಮಟ್ಟಿಗೆ ಪ್ರವೇಶ ಕೊಟ್ಟಿದ್ದರೆ, ಅಂಥ ಅತಿಥಿ ಪಾತ್ರದ ಬಗ್ಗೆ ನಮಗೆ 60 ಪದಗಳಲ್ಲಿ ಬರೆದು ಕಳುಹಿಸಿ.

Advertisement

Udayavani is now on Telegram. Click here to join our channel and stay updated with the latest news.

Next