Advertisement

ಅಡಿಗಾಸ್‌ ಯಾತ್ರಾದಿಂದ ವಿಶೇಷ ರಿಯಾಯಿತಿ ಪ್ರವಾಸ

11:05 PM Nov 01, 2019 | Lakshmi GovindaRaju |

ಬೆಂಗಳೂರು: ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದಿಂದ ಮಾನ್ಯತೆ ಪಡೆದ ಅಡಿಗಾಸ್‌ ಯಾತ್ರಾ ವತಿಯಿಂದ ರಾಜ್ಯೋತ್ಸವ ಹಾಗೂ ದೀಪಾವಳಿ ಹಿನ್ನೆಲೆ ದೇಶದ ಸುಪ್ರಸಿದ್ಧ ತಾಣಗಳಿಗೆ ವಿಶೇಷ ರಿಯಾಯಿತಿಯಲ್ಲಿ ಪ್ರವಾಸ ಆಯೋಜಿಸಲಾಗಿದೆ.

Advertisement

ಅಡಿಗಾಸ್‌ ಯಾತ್ರಾ ಸಂಸ್ಥಾಪಕ ಕೆ. ನಾಗರಾಜ ಅಡಿಗ ಅವರು ಪ್ರವಾಸ ಕಾರ್ಯಕ್ರಮ ಪಟ್ಟಿಯನ್ನು ಸಂಸ್ಥೆಯ www.adigasyatra.in ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದರು. 500ಕ್ಕೂ ಪ್ರವಾಸಗಳನ್ನು ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ವಿನ್ಯಾಸ ಮಾಡಲಾಗಿದೆ. ಪ್ರವಾಸಿಗರ ಸಮಯ, ಭದ್ರತೆ, ಅತ್ಯುತ್ತಮ ಕಾರ್ಯಕ್ರಮ ಪಟ್ಟಿ, ಮಾರ್ಗದರ್ಶನ ಮತ್ತು ಮಾಹಿತಿ ಒಳಗೊಂಡಿದೆ.

ಪ್ರವಾಸಿ ಗರ ಅನುಕೂಲಕ್ಕೆ ತಕ್ಕಂತೆ ಸ್ಟಾಂಡರ್ಡ್‌, ಡೀಲಕ್ಸ್‌, ಲಕ್ಸುರಿ, ಪ್ರೀಮಿಯಂ ಪ್ರವಾಸ ದರವನ್ನು ನಿಗದಿಪಡಿಸಲಾಗಿದೆ. ಇನ್ನು ಬಜೆಟ್‌ ಅನುಗುಣವಾಗಿ 2 ಸ್ಟಾರ್‌, 3 ಸ್ಟಾರ್‌, 4 ಸ್ಟಾರ್‌, 5 ಸ್ಟಾರ್‌ ಹೋಟೆಲ್‌ಗ‌ಳ ಪ್ಯಾಕೇಜುಗಳು ಲಭ್ಯವಿದೆ.

ಉತ್ತರ ಭಾರತ ಹಾಗೂ ನೇಪಾಳ (23 ಪ್ರವಾಸಗಳು), ಪೂರ್ವ ಭಾರತ (9 ಪ್ರವಾಸಗಳು), ಪಶ್ಚಿಮ ಹಾಗೂ ಮಧ್ಯಭಾರತ (8 ಪ್ರವಾಸಗಳು), ದಕ್ಷಿಣಭಾರತ (6 ಪ್ರವಾಸಗಳು), ಹೀಗೆ 40ಕ್ಕೂ ಅಧಿಕ ಪ್ರವಾ ಸ ಗಳು ಲಭ್ಯವಿದೆ. ಪ್ರವಾಸವು ಸಸ್ಯಾಹಾರಿ ಊಟೋಪಹಾರ, ನುರಿತ ಮಾರ್ಗ ದರ್ಶನ, ರೈಲು ಹಾಗೂ ವಿಮಾನ ಪ್ರಯಾ ಣದ ವ್ಯವಸ್ಥೆ, ಸುಸಜ್ಜಿತ ವಾಹನ ಹಾಗೂ ವಸತಿ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ.

ಮೇ ತಿಂಗಳಿನಲ್ಲಿ ಪ್ರಾರಂಭವಾಗುವ ಚಾರಧಾಮ ಯಾತ್ರೆ, ಜನವರಿ, ಫೆಬ್ರವರಿ, ಮಾರ್ಚ್‌ನಲ್ಲಿ ಜರುಗುವ ಗುಜರಾತಿನ ರಾನ್‌ ಆಫ್ ಕಚ್‌ ಹಾಗೂ ಇತರ ಪ್ರೇಕ್ಷಣೀಯ ಸ್ಥಳಗಳು, ರಾಜಸ್ಥಾನ, ಶಿಮ್ಲಾ, ಮನಾಲಿ, ಸಿಕ್ಕಿಂ, ಡಾರ್ಜಿಲಿಂಗ್‌, ಈಶಾನ್ಯ ಭಾರತದ ಸಪ್ತ ಸಹೋದರಿಯರೆಂದು ಪ್ರಸಿದ್ಧ ವಾದ ಅಸ್ಸಾಂ, ಅರುಣಾ ಚಲ ಪ್ರದೇಶ, ಮೇಘಾಲಯ, ನಾಗಾಲ್ಯಾಂಡ್‌, ಮಿಝೊರಾಂ, ಮಣಿಪುರ, ತ್ರಿಪುರ ಪ್ರವಾಸಗಳಿಗೂ ರಿಯಾಯಿತಿ ಲಭ್ಯವಿದೆ.

Advertisement

ಇನ್ನು ಸುಂದರ ಗಿರಿಧಾಮಗಳು, ನೈಸರ್ಗಿಕ ತಾಣಗಳು, ಐತಿಹಾಸಿಕ ಸ್ಥಳಗಳು, ತೀರ್ಥಕ್ಷೇತ್ರಗಳು, ಜ್ಯೋತಿರ್ಲಿಂಗ, ಕಾಶಿ ಯಾತ್ರೆ, ಅಮರನಾಥ ಯಾತ್ರೆ, ಚಾರಧಾಮ ಯಾತ್ರೆ ಮುಂತಾದ ಯಾತ್ರೆ ಮಾಡುವವರಿಗೆ ಅಗತ್ಯ ವ್ಯವಸ್ಥೆ ಲಭ್ಯವಿದೆ. ಆಸಕ್ತರು ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಪ್ರವಾಸಿಗರು ತಮಗೆ ಲಭ್ಯವಿರುವ ದಿನಗಳು, ತಮ್ಮ ಕನಸಿನ ತಾಣ, ತಮ್ಮ ಪ್ರವಾಸದ ವೆಚ್ಚವನ್ನು ನಮೂದಿಸಿದಲ್ಲಿ ಸುಲಭವಾಗಿ ಮಾಹಿತಿಯನ್ನು ಪಡೆಯಬಹುದಾಗಿದೆ.

ಮಾಹಿತಿಗಾಗಿ: ಬೆಂಗಳೂರು ಬಸವನಗುಡಿ: 080-26616678, 9611600810, ಮಲ್ಲೇಶ್ವರ: 080-23346678, 7022259003, ಹುಬ್ಬಳ್ಳಿ: 0836-2256678, 7022259002 ವೆಬ್‌ಸೈಟ್‌: www.adigasyatra.in ಇ ಮೇಲ್‌: care@adigasyatra.com ಸಂಪರ್ಕಿಸಲು ಕೋರಿದೆ.

ವಿಶೇಷ ರಿಯಾಯಿತಿ: ಈ ಪ್ರವಾಸವನ್ನು ನವೆಂಬರ್‌ 15ರೊ ಳಗೆ ಕಾಯ್ದಿರಿಸಿದವರಿಗೆ ವಿಶೇಷ ರಿಯಾಯಿತಿ ನೀಡಲಾಗುವುದು. ಅಲ್ಲದೆ, 10ಕ್ಕೂ ಅಧಿಕ ಸೀಟ್‌ ಕಾದಿರಿಸಿ ದವರಿಗೆ ಉಚಿತ ಪ್ರವಾಸ ಸೌಲಭ್ಯಗಳಿವೆ ಎಂದು ಅಡಿಗಾಸ್‌ ಯಾತ್ರಾ ನಿರ್ದೇಶಕ ರಾದ ಆಶಾ ನಾಗರಾಜ್‌ ಅಡಿಗ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next