Advertisement

ಆನೆಗುಡ್ಡೆ ವಿನಾಯಕನಿಗೆ ಸ್ವರ್ಣಮುಖ ಅಲಂಕಾರ

09:35 PM Jan 01, 2019 | Karthik A |

ತೆಕ್ಕಟ್ಟೆ : ಪುರಾಣ ಪ್ರಸಿದ್ಧ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ 2019ನೇ ಹೊಸ ವರುಷದ ಹಿನ್ನೆಲೆಯಲ್ಲಿ ಜ.1ಮಂಗಳವಾರದಂದು ಭಕ್ತರ ದಂಡು ದೇಗುಲಕ್ಕೆ ಹರಿದು ಬಂದಿದ್ದು, ಶ್ರೀದೇವರಿಗೆ ಸ್ವರ್ಣಮುಖ ವಿಶೇಷ ಅಲಂಕಾರ ಮಾಡಲಾಗಿದ್ದು ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ , ಅನುವಂಶಿಕ ಧರ್ಮದರ್ಶಿಗಳಾದ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಕೆ.ವಿಠಲ ಉಪಾಧ್ಯಾಯ ಹಾಗೂ ಅನುವಂಶಿಕ ಪರ್ಯಾಯ ಅರ್ಚಕರಾಗಿ ಕೆ.ಸೂರ್ಯನಾರಾಯಣ ಉಪಾಧ್ಯಾಯ ಮತ್ತು ಸಹೋದರರು, ಮೆನೇಜರ್‌ ಆನಂದರಾಮ ಉರಾಳ ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next