Advertisement

Speaker: ಸ್ಪೀಕರ್‌ ನ್ಯಾಯಾಲಯದ ಆದೇಶ ಮೀರಲಾಗದು: ಸುಪ್ರೀಂ

09:35 PM Oct 13, 2023 | Team Udayavani |

ನವದೆಹಲಿ: ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ಸೇರಿದಂತೆ ಶಿವಸೇನೆಯ ಅವರ ಬಣದ ಶಾಸಕರ ಅನರ್ಹತೆ ವಿಚಾರಣೆಗೆ ಸಂಬಂಧಸಿದಂತೆ ಮಹಾರಾಷ್ಟ್ರ ಸ್ಪೀಕರ್‌ ನ್ಯಾಯಾಲಯದ ಆದೇಶವನ್ನು ಮೀರಲಾಗದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಅಲ್ಲದೇ ಶಾಸಕರ ಅನರ್ಹತೆ ಪ್ರಕರಣದ ಕುರಿತು ನಿರ್ಧಾರ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.

Advertisement

ಶಿಂಧೆ ಬಣದ ಶಾಸಕರ ಅನರ್ಹತೆ ಪ್ರಕರಣವನ್ನು ತುರ್ತಾಗಿ ನಿರ್ಧರಿಸುವಂತೆ ಕೋರಿ ಶಿವಸೇನೆಯ ಉದ್ಧವ್‌ ಠಾಕ್ರೆ ಬಣದ ಶಾಸಕ ಸುನೀಲ್‌ ಪ್ರಭು ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಸಿಜೆಐ ಡಿ.ವೈ.ಚಂದ್ರಚೂಡ್‌ ಅವರಿದ್ದ ನ್ಯಾಯಪೀಠ, “ಸುಪ್ರೀಂ ಕೋರ್ಟ್‌ನ ಆದೇಶವನ್ನು ಮೀರಲಾಗದು ಎಂದು ಯಾರಾದರೂ ಮಹಾರಾಷ್ಟ್ರ ಸ್ಪೀಕರ್‌ ಅವರಿಗೆ ಸಲಹೆ ನೀಡಿ” ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ಹೇಳಿತು. “ಮುಂದಿನ ವಿಧಾನಸಭೆ ಚುನಾವಣೆಗೂ ಮುನ್ನ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ, ಇಡೀ ಪ್ರಕ್ರಿಯೆ ನಿರುಪಯುಕ್ತವಾಗಲಿದೆ” ಎಂದು ಅಭಿಪ್ರಾಯಪಟ್ಟಿತು.

Advertisement

Udayavani is now on Telegram. Click here to join our channel and stay updated with the latest news.

Next