Advertisement

ಎಸ್‌ಪಿಬಿಗೆ ಎಸ್‌ವಿಎನ್‌ ಸಂಗೀತ ಪ್ರಶಸ್ತಿ

12:54 AM Apr 22, 2019 | Team Udayavani |

ಬೆಂಗಳೂರು: ಹಲವು ವೇದಿಕೆಗಳಲ್ಲಿ ಹಾಡಿದ್ದೇನೆ. ಆದರೆ, ಶ್ರೀರಾಮಸೇವಾ ಮಂಡಳಿಯ ವೇದಿಕೆಯಲ್ಲಿ ಹಾಡುತ್ತಿರುವುದು ವಿಶೇಷ ಅನುಭವ ನೀಡುತ್ತಿದೆ ಎಂದು ಎಸ್‌.ಪಿ. ಬಾಲಸುಬ್ರಮಣ್ಯಂ ಹೇಳಿದರು.

Advertisement

ಶ್ರೀರಾಮಸೇವಾ ಮಂಡಳಿ ವತಿಯಿಂದ ಚಾಮರಾಜಪೇಟೆಯ ಹಳೇ ಕೋಟೆ ಮೈದಾನದಲ್ಲಿ ಆಯೋಜಿಸಿದ್ದ “ಶ್ರೀರಾಮಸೇವಾ ಮಂಡಳಿಯ 18ನೇ ಸಂಗೀತೋತ್ಸವ’ ಕಾರ್ಯಕ್ರಮದಲ್ಲಿ ಭಾನುವಾರ ಮಂಡಳಿಯಿಂದ “ಎಸ್‌.ವಿ.ನಾರಾಯಣಸ್ವಾಮಿ ಸಂಗೀತ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು.

ಶ್ರೀರಾಮಸೇವಾ ಮಂಡಳಿಯಲ್ಲಿ ಹಲವು ಮಹಾನೀಯರು ಹಾಡಿದ್ದಾರೆ ಇಂತಹ ಒಂದು ವೇದಿಕೆಯಲ್ಲಿ ಹಾಡುವುದೇ ಪುಣ್ಯ. ಪ್ರಶಸ್ತಿಯೂ ನೀಡಿ ಗೌರವಿಸುತ್ತಿರುವುದು ಸಂತೋಷವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಶ್ರೀರಾಮಸೇವಾ ಮಂಡಳಿಯ ಕಾರ್ಯದರ್ಶಿ ಎಸ್‌.ಎನ್‌. ವರದರಾಜ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next