Advertisement

ಹಾರ್ದಿಕ್‌ ಟೀಕಾಕಾರರ ಮೇಲೆ ವಾರ್ನ್ ಕಿಡಿ

01:20 AM Feb 12, 2019 | |

ಮುಂಬೈ: ಕಾಫಿ ವಿತ್‌ ಕರಣ್‌ ಟೀವಿ ಶೋನಲ್ಲಿ ಅಶ್ಲೀಲ ಹೇಳಿಕೆ ನೀಡಿದ್ದಾರೆಂಬ ಆರೋಪದಲ್ಲಿ ಹಾರ್ದಿಕ್‌ ಪಾಂಡ್ಯ ಹಾಗೂ ಕೆ.ಎಲ್‌.ರಾಹುಲ್‌ ನಿಷೇಧಕ್ಕೊಳಗಾಗಿದ್ದರು. ಅವರು ಮಹಿಳೆಯರನ್ನು ಅಗೌರವಿಸಿದ್ದಾರೆಂದು ಭಾರೀ ಟೀಕೆಗಳು ಕೇಳಿ ಬಂದಿದ್ದವು. ಆದರೆ ಈ ಇಡೀ ಪ್ರಕರಣವನ್ನು ಮುಟಾuಳತನದ್ದು ಎಂದು ಆಸ್ಟ್ರೇಲಿಯ ಕ್ರಿಕೆಟ್‌ ದಂತಕಥೆ ಶೇನ್‌ ವಾರ್ನ್ ಜರಿದಿದ್ದಾರೆ. 

Advertisement

ಪ್ರತಿಯೊಬ್ಬರಿಗೂ ಅವರು ಇರುವಂತೆಯೇ ಇರಲು ಬಿಡಿ ಎಂದು ಹೇಳಿದ್ದಾರೆ. ಈಗ ಎಲ್ಲ ಕಡೆಯೂ ನೋಡುವವರ ಕಣ್ಣಿಗೆ ಸರಿಯಿದ್ದರೆ ಸಾಕು (ಪೊಲಿಟಿಕಲಿ ಕರೆಕ್ಟ್) ಎಂಬ ಮನೋಭಾವ ತೀವ್ರವಾಗಿದೆ. ಒಬ್ಬ ಆಟಗಾರ, ತುಸುವೇಗೆರೆ ದಾಟಿದರೂ, ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಾರೆ ಎಂದು ಶೇನ್‌ ವಾರ್ನ್ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next