Advertisement

ಎಸ್ಪಿ ಕಚೇರಿಯ ಆನೆ ದಂತ ನಾಪತ್ತೆ ಪ್ರಕರಣ ಸಿಐಡಿಗೆ

02:08 AM Jan 26, 2019 | Team Udayavani |

ಶಿವಮೊಗ್ಗ: ಇಲ್ಲಿನ ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ನಿಗೂಢ ರೀತಿಯಲ್ಲಿ ನಡೆದಿರುವ ಬಹುಕೋಟಿ ರೂ. ಮೌಲ್ಯದ ಜೋಡಿ ಆನೆ ದಂತ ನಾಪತ್ತೆ ಪ್ರಕರಣವನ್ನು ರಾಜ್ಯ ಸರ್ಕಾರ ಕೊನೆಗೂ ಸಿಐಡಿಗೆ ವಹಿಸಿದೆ.

Advertisement

ಪೊಲೀಸ್‌ ಇಲಾಖೆಯಲ್ಲಿ ತೀವ್ರ ಸಂಚಲನಕ್ಕೆ ಕಾರಣವಾದ ಈ ಪ್ರಕರಣ ಕುರಿತು ಜಿಲ್ಲಾಮಟ್ಟದಲ್ಲಿ ನಡೆದ ತನಿಖೆಯಾವುದೇ ನಿರೀಕ್ಷಿತ ಪ್ರಗತಿ ಕಾಣಲಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣದ ಹೆಚ್ಚಿನ ತನಿಖೆಯನ್ನು ಸಿಐಡಿಗೆ ವಹಿಸಿದೆ.

ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರು ಇದೇ ಜ.1ರಂದು ಸಿಐಡಿಗೆ ಪತ್ರ ಬರೆದು(ಪತ್ರ ಸಂಖ್ಯೆ ಡಿಸಿಆರ್‌ಬಿ/1/19) ಶಿವಮೊಗ್ಗದ ಎಸ್‌ಪಿ ಕಚೇರಿಯಲ್ಲಿದ್ದ ಜೋಡಿ ದಂತ ನಾಪತ್ತೆ ಪ್ರಕರಣದ ವಿಸ್ತೃತ ತನಿಖೆ ನಡೆಸುವಂತೆ ಕೋರಿದ್ದರು. ಆರಂಭದಲ್ಲಿ ಅಪರ ಎಸ್‌ಪಿ ಮಟ್ಟದಲ್ಲಿ ನಡೆದ ತನಿಖೆ, ನಂತರ ಜಿಲ್ಲಾಮಟ್ಟದಲ್ಲಿ ನಡೆಯುತ್ತಿತ್ತು. ಇದೀಗ ಸಿಐಡಿ ಕಚೇರಿಯ ಕದ ತಟ್ಟಿದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next