Advertisement

ಅಖಿಲೇಶ್ ಗೆ ರಾಜಕೀಯ ಹೆಲ್ತ್‌ ಟಾನಿಕ್‌ ಬೇಕಿದೆ : ಉ.ಪ್ರ. ಡಿಸಿಎಂ ಶರ್ಮಾ

08:33 AM Apr 30, 2019 | Team Udayavani |

ಲಕ್ನೋ : ಉತ್ತರ ಪ್ರದೇಶದಲ್ಲಿ ಮಾಯಾವತಿ ಅವರ ಬಹುಜನ ಸಮಾಜ ಪಕ್ಷ ಮತ್ತು ಅಖೀಲೇಶ್‌ ಯಾದವ್‌ ಅವರ ಸಮಾಜವಾದಿ ಪಕ್ಷ ರೂಪಿಸಿಕೊಂಡಿರುವ ಮೈತ್ರಿಯು ಅನೈಸರ್ಗಿಕ ಮೈತ್ರಿಯಾಗಿರುವುದರಿಂದ 2017ರಲ್ಲಿ ಈ ಮೈತ್ರಿ ಕೂಟ ಅನುಭವಿಸಿದ್ದ ಸೋಲನ್ನೇ ಈ ಬಾರಿ ಮತ್ತೆ ಕಾಣಲಿದೆ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ದಿನೇಶ್‌ ಯಾದವ್‌ ಹೇಳಿದ್ದಾರೆ.

Advertisement

ಅಖೀಲೇಶ್‌ ಯಾದವ್‌ ಅವರು ತಮ್ಮ ರಾಜಕೀಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ; ಆದುದರಿಂದ ಅಖೀಲೇಶ್‌ಗೆ ನಿಜಕ್ಕೂ ಬೇಕಿದೆ ರಾಜಕೀಯ ಹೆಲ್ತ್‌ ಟಾನಿಕ್‌ ಎಂದು ಶರ್ಮಾ ವ್ಯಂಗ್ಯವಾಡಿದರು.

ಒಬ್ಬ ವ್ಯಕ್ತಿ ದುರ್ಬಲನಾದಾಗ ಆತ ಆರೋಗ್ಯ ವರ್ಧನೆಗೆ ಟಾನಿಕ್‌ ತೆಗೆದುಕೊಳ್ಳುವುದು ಅಗತ್ಯವಾಗುತ್ತದೆ; ಹಾಗೆಯೇ ರಾಜಕೀಯವಾಗಿ ದುರ್ಬಲರಾಗಿರುವ ಅಖೀಲೇಶ್‌ಗೆ ಈಗ ರಾಜಕೀಯ ಹೆಲ್ತ್‌ ಟಾನಿಕ್‌ ಬೇಕಿದೆ ಎಂದು ಶರ್ಮಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next