Advertisement

ವಾರಾಣಸಿ : ಅಮಾನತಾದ ಬಿಎಸ್‌ಎಫ್ ಕಾನ್‌ಸ್ಟೆಬಲ್‌ ಮೋದಿ ವಿರುದ್ಧ ಎಸ್‌ಪಿ ಅಭ್ಯರ್ಥಿ

08:36 AM Apr 30, 2019 | Sathish malya |

ಲಕ್ನೋ : ದೇಶದ ಸೈನಿಕರಿಗೆ ಕಳಪೆ ಆಹಾರ ಪೂರೈಸಲಾಗುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ವಿಡಿಯೋ ಹರಿಯಬಿಟ್ಟು ದೇಶಾದ್ಯಂತ ಸುದ್ದಿ ಮಾಡಿ ಅಂತಿಮವಾಗಿ ಸೇನೆಯಿಂದ ಅಮಾನತುಗೊಂಡಿದ್ದ ಬಿಎಸ್‌ಎಫ್ ಕಾನ್‌ಸ್ಟೆಬಲ್‌ ತೇಜ್‌ ಬಹಾದ್ದೂರ್‌ ಯಾದವ್‌ ಅವರನ್ನು ಅಖೀಲೇಶ್‌ ಯಾದವ್‌ ನೇತೃತ್ವದ ಸಮಾಜವಾದಿ ಪಕ್ಷ, ವಾರಾಣಸಿ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸೆಣಸಲು ತನ್ನ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದೆ.

Advertisement

2017ರಲ್ಲಿ ಸೇನೆಯಿಂದ ಅಮಾನತುಗೊಂಡಿದ್ದ ಯಾದವ್‌ ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದಲ್ಲಿ ಮೋದಿ ವಿರುದ್ಧ ಸ್ಪರ್ಧಿಸಲಿದ್ದಾರೆ ಎಂದು ಎಸ್‌ ಪಿ ನಾಯಕ ಇಂದಿಲ್ಲಿ ಹೇಳಿದರು.

ಏಳನೇ ಮತ್ತು ಕೊನೇ ಹಂತದಲ್ಲಿ ವಾರಾಣಸಿಯಲ್ಲಿ ಮೇ 19ರಂದು ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಎ.29 ಸೋಮವಾರ (ಇಂದು) ಕೊನೇ ದಿನವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next