Advertisement

ದೀಪ ಬೆಳಗಿ, ಎಸ್ಪಿಬಿ ಆತ್ಮಕ್ಕೆ ಶಾಂತಿ ಕೋರಿದ ಇಳಯರಾಜ

04:20 PM Sep 28, 2020 | sudhir |

ಚೆನ್ನೈ: ಇತ್ತೀಚೆಗೆ ಅಗಲಿದ ಗಾನ ಗಾರುಡಿಗ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರನ್ನು ಸ್ಮರಿಸಿ ಆಪ್ತಮಿತ್ರ, ಸಂಗೀತ ಸಂಯೋಜಕ ಇಳಯರಾಜ ದೀಪ ಬೆಳಗಿ ಪ್ರಾರ್ಥಿಸಿದರು.

Advertisement

ತಿರುವಣ್ಣಾಮಲೈ ದೇವಸ್ಥಾನದಲ್ಲಿ ಇಳಯರಾಜ ಹಣತೆ ಹಿಡಿದು ನಿಂತ ಫೋಟೋ ವೈರಲ್‌ ಆಗಿದೆ. ಎಸ್ಪಿಬಿ ಅವರ ಅಂತ್ಯಸಂಸ್ಕಾರ ನೆರವೇರಿದ ಸ್ಥಳಕ್ಕೆ ಇಳಯರಾಜ ಧಾವಿಸಿರಲಿಲ್ಲ. ಅದರ ಬದಲಾಗಿ ಹಣತೆ ಬೆಳಗಿ, ಗೆಳೆಯನ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಸಿನಿಮಾರಂಗ ಪ್ರವೇಶಕ್ಕೂ ಮೊದಲೇ ಎಸ್ಪಿಬಿ, ಇಳಯರಾಜ ಪರಸ್ಪರ ಗಾಢ ಸ್ನೇಹ ಹೊಂದಿದ್ದರು. ಇಳಯರಾಜ ಜತೆಗೂಡಿ ಗಂಗೈ ಅಮರೆನ್‌, ಅನಿರುತ್ತಾ ಎಂಬ ಮ್ಯೂಸಿಕ್‌ ಟ್ರೂಪ್‌ಗ್ಳನ್ನು ಎಸ್ಪಿಬಿ ಮುನ್ನಡೆಸುತ್ತಿದ್ದರು. ಇವರಿಬ್ಬರ ಜೋಡಿ ಹಲವು ಹಿಟ್‌ ಹಾಡುಗಳನ್ನು ಕೊಡುಗೆ ನೀಡಿವೆ.

Advertisement

Udayavani is now on Telegram. Click here to join our channel and stay updated with the latest news.

Next