Advertisement

South Africa pitches ಸ್ಪಿನ್ನರ್‌ಗಳಿಗೆ ಲಾಭ: ಕುಲದೀಪ್‌ ಯಾದವ್‌

11:26 PM Dec 15, 2023 | Team Udayavani |

ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾ ಪಿಚ್‌ಗಳು ಮೂಲತಃ ಪೇಸ್‌ ಮತ್ತು ಬೌನ್ಸ್‌ ಹೊಂದಿರಬಹುದಾದರೂ ಇವು ಸ್ಪಿನ್ನರ್‌ಗಳಿಗೂ ಲಾಭ ತರಲಿವೆ ಎಂಬುದಾಗಿ ತೃತೀಯ ಟಿ20 ಪಂದ್ಯದ ಬೌಲಿಂಗ್‌ ಹೀರೋ, ಬರ್ತ್‌ಡೇ ಬಾಯ್‌ ಕುಲದೀಪ್‌ ಯಾದವ್‌ ಹೇಳಿದ್ದಾರೆ.

Advertisement

ಗುರುವಾರ “ನ್ಯೂ ವಾಂಡರರ್ ಸ್ಟೇಡಿ ಯಂ’ನಲ್ಲಿ ನಡೆದ 3ನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಕ್ರಿಕೆಟಿಗರು ಸ್ಪಿನ್‌ ಸುಳಿಗೆ ಸಿಲುಕಿ ಪಟಪಟನೆ ವಿಕೆಟ್‌ ಕಳೆದುಕೊಂಡಿದ್ದರು. ಭಾರತದ 7ಕ್ಕೆ 201 ರನ್ನಿಗೆ ಉತ್ತರವಾಗಿ ಮಾರ್ಕ್‌ರಮ್‌ ಬಳಗ 13.5 ಓವರ್‌ಗಳಲ್ಲಿ 95 ರನ್ನಿಗೆ ಕುಸಿದಿತ್ತು. ಕುಲದೀಪ್‌ ಗಳಿಕೆ 17ಕ್ಕೆ 5 ವಿಕೆಟ್‌. ಕೇವಲ 2.5 ಓವರ್‌ಗಳ “ಚೈನಾಮನ್‌’ ದಾಳಿಯಲ್ಲಿ ಹರಿಣಗಳ ಹೋರಾಟವನ್ನು ಅವರು ಕೊನೆಗೊಳಿಸಿದ್ದರು. ಇದರಿಂದ 3 ಪಂದ್ಯಗಳ ಸರಣಿ 1-1 ಸಮಬಲದಲ್ಲಿ ಕೊನೆಗೊಂಡಿತ್ತು.

ನಿಜಕ್ಕಾದರೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಅರ್ಹವಾದ ಸಾಧನೆ ಇದಾಗಿತ್ತು. ಅಲ್ಲದೇ ಬರ್ತ್‌ಡೇಯಂದೇ ಕುಲದೀಪ್‌ ಈ ಪರಾಕ್ರಮ ತೋರಿದ್ದರು. “ನನ್ನ ಪಾಲಿಗೆ ಇದೊಂದು ಸ್ಪೆಷಲ್‌ ಡೇ. 5 ವಿಕೆಟ್‌ ಉರುಳಿಸುತ್ತೇನೆಂದು ನಾನು ಭಾವಿಸಿರಲೇ ಇಲ್ಲ. ತಂಡದ ಗೆಲುವು ಮುಖ್ಯವಾಗಿತ್ತು. ಕೆಲವು ಸಮಯದ ಬಳಿಕ ಆಡಲಿಳಿದ ಕಾರಣ ಬೌಲಿಂಗ್‌ ಬಗ್ಗೆ ಚಿಂತೆ ಇತ್ತು. ಲಯ ಕಂಡುಕೊಳ್ಳಬೇಕಿತ್ತು. ಇಂದು ಪರಿಪೂರ್ಣ ಲಯದಲ್ಲಿದ್ದೆ. ಪಿಚ್‌ ಸ್ಪಿನ್ನಿಗೂ ನೆರವು ನೀಡುತ್ತಿತ್ತು’ ಎಂಬುದಾಗಿ ಜೀವನಶ್ರೇಷ್ಠ ಬೌಲಿಂಗ್‌ ಪ್ರದರ್ಶಿಸಿದ ಕುಲದೀಪ್‌ ಹೇಳಿದರು.

ದಕ್ಷಿಣ ಆಫ್ರಿಕಾದ ಸ್ಪಿನ್ನರ್‌ ಕೇಶವ್‌ ಮಹಾರಾಜ್‌ ಕೂಡ ಯಶಸ್ಸು ಕಂಡಿದ್ದರು. 3ನೇ ಓವರ್‌ನಲ್ಲೇ ದಾಳಿಗಿಳಿದ ಅವರು ಒಂದೇ ಓವರ್‌ನಲ್ಲಿ ಗಿಲ್‌ ಮತ್ತು ತಿಲಕ್‌ ವರ್ಮ ವಿಕೆಟ್‌ ಉರುಳಿಸಿದ್ದರು

ಕುಲದೀಪ್‌ ಯಾದವ್‌ 2018 ಮತ್ತು 2021ರಲ್ಲೂ ದಕ್ಷಿಣ ಆಫ್ರಿಕಾದಲ್ಲಿ ಆಡಿದ್ದರು. ಅನಂತರ ಶಸ್ತ್ರಚಿಕಿತ್ಸೆಗೊಳಗಾದ ಕಾರಣ 6-7 ತಿಂಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಯಿತು.

Advertisement

“2018ರಲ್ಲಿ ನಾನು ದ. ಆಫ್ರಿಕಾ ಪ್ರವಾಸಕ್ಕೆ ಹೊಸಬನಾಗಿದ್ದೆ. 2021ರಲ್ಲಿ ಫಿಟ್‌ನೆಸ್‌ ಸಮಸ್ಯೆ ಎದುರಾಗಿತ್ತು. ಶಸ್ತ್ರಚಿಕಿತ್ಸೆ ಬಳಿಕ ನನ್ನ ಬೌಲಿಂಗ್‌ ಶೈಲಿಯಲ್ಲಿ ಕೆಲವು ಬದಲಾವಣೆ ಮಾಡಿಕೊಂಡೆ. ಇದರಿಂದ ಯಶಸ್ಸು ಸಾಧ್ಯವಾಗಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next