Advertisement

ಉಳ್ಳಾಲ: ಬೀಫ್ ಸ್ಟಾಲ್ ಗಳಿಗೆ ಬೆಂಕಿ ಹಚ್ಷಿದ ಪ್ರಕರಣ; ಓರ್ವನ ಬಂಧನ

01:23 PM Jan 16, 2021 | Team Udayavani |

ಉಳ್ಳಾಲ:  ಬೀಫ್ ಸ್ಟಾಲ್ ಗಳಿಗೆ ಬೆಂಕಿ ಹಚ್ಷಿದ ಪ್ರಕರಣಕ್ಕೆ ಸಂಬಂಧಿಸಿ ತೊಕ್ಕೊಟ್ಟಿನ ನಾಗರಾಜ್(39) ಎಂಬಾತನನ್ನು ಬಂಧಿಸಲಾಗಿದೆ.

Advertisement

ಈತ  ತನ್ನ ಸ್ನೇಹಿತ ಲತೀಫ್ ಅವರ ಮನೆಗೆ ಅಂಗಡಿಯಿಂದ ಬೀಫ್ ಖರೀದಿಸಿ ಕೊಂಡು ಹೋಗಿ ಕೊಡುತ್ತಿದ್ದ. ಅಂಗಡಿಯವನ ಬಳಿ ಒಮ್ಮೆ ಸ್ವಲ್ಪ ಜಾಸ್ತಿ ಮಾಂಸ ಕೇಳಿದಾಗ ಕೊಡಲಿಲ್ಲ. ಇದರಿಂದ ತನಗೆ ಅವಮಾನವಾಯಿತು ಎಂಬ ಸಿಟ್ಟಿನಲ್ಲಿ ನಾಗರಾಜ ರಾತ್ರಿ ಬೆಂಕಿ ಹಚ್ಚಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಘಟನೆಯ ಹಿನ್ನಲೆ:

ತೊಕ್ಕೊಟ್ಟು ಒಳಪೇಟೆಯ ಮಾರುಕಟ್ಟೆಯನ್ನು ನೂತನವಾಗಿ‌ ನಿರ್ಮಿಸುವ ಉದ್ದೇಶದಿಂದ ಕೆಡವಲಾಗಿದ್ದು, ಮಾರುಕಟ್ಟೆಯ ಅಂಗಡಿಗಳಿಗೆ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗಿತ್ತು. ಇದರೊಂದಿಗೆ ಬೀಫ್ ಸ್ಟಾಲ್ ಗಳನ್ನು ರೈಲ್ವೇ ಹಲಕಿ ಬದಿಯಲ್ಲಿ ತೆರೆಯಲಾಗಿತ್ತು. ಜ. 8ರ ರಾತ್ರಿ ಇಲ್ಲಿನ ಬೀಫ್ ಸ್ಟಾಲ್ ಗಳಿಗೆ ಬೆಂಕಿ ಹಚ್ಚಲಾಗಿತ್ತು.

ಇದೀಗ ಘಟನೆಗೆ ಸಂಬಂಧಿಸಿದಂತೆ ನಾಗರಾಜ್(39) ಎಂಬಾತನನ್ನು ಬಂಧಿಸಲಾಗಿದೆ.

Advertisement

ಇದನ್ನೂ ಓದಿ: KBCಯಲ್ಲಿ 12.5 ಲಕ್ಷ ಗೆದ್ದು ಬಡ ಮಕ್ಕಳ ಆಶಾಕಿರಣವಾದ ರವಿ ಕಟಪಾಡಿ

Advertisement

Udayavani is now on Telegram. Click here to join our channel and stay updated with the latest news.

Next