Advertisement

ಕ್ರಿಕೆಟ್‌ ಸಲಹಾ ಸಮಿತಿಗೆ ದಾದಾ ಗುಡ್‌ಬೈ?

05:37 AM Apr 18, 2019 | mahesh |

ಮುಂಬಯಿ: ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಮಾರ್ಗದರ್ಶಕರಾಗಿರುವ ಮಾಜಿ ಕ್ರಿಕೆಟಿಗ ಸೌರವ್‌ ಗಂಗೂಲಿ, ತಮ್ಮ ಬಿಸಿಸಿಐನ ಕ್ರಿಕೆಟ್‌ ಸಲಹಾ ಸಮಿತಿಯ (ಸಿಎಸಿ) ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಇಂಗಿತ ವ್ಯಕ್ತಪಡಿಸಿದ್ದಾರೆಂದು ಮೂಲಗಳು ತಿಳಿಸಿವೆ.

Advertisement

ಡೆಲ್ಲಿ ಫ್ರಾಂಚೈಸಿಗೆ ಗಂಗೂಲಿ ಮಾರ್ಗದರ್ಶಕರಾಗಿರುವುದರಿಂದ ಸಿಎಸಿಯಲ್ಲಿ ಅವರು ಸ್ವಹಿತಾಸಕ್ತಿ ಸಂಘರ್ಷಕ್ಕೆ ಒಳಗಾಗಲಿದ್ದಾರೆಂಬ ಊಹಾಪೋಹಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ, ಭಾರತೀಯ ಕ್ರಿಕೆಟ್‌ ಮಂಡಳಿಯ ಒಂಬುಡ್ಸ್‌ಮನ್‌ ಆಗಿರುವ ನಿವೃತ್ತ ನ್ಯಾ. ಡಿ.ಕೆ. ಜೈನ್‌ ಅವರು ಗಂಗೂಲಿಗೆ ಸಮನ್ಸ್‌ ಜಾರಿಗೊಳಿಸಿದ್ದಾರೆ. ಅಲ್ಲದೆ, ಡೆಲ್ಲಿ ತಂಡದಲ್ಲಿ ಗಂಗೂಲಿಯ ಸೇವೆಯ ಬಗ್ಗೆಯೂ ಕೂಲಂಕಷ ವಿಚಾರಣೆ ನಡೆಸಬೇಕೆಂದು ಬಿಸಿಸಿಐನ ಮುಖ್ಯ ಕಾರ್ಯನಿರ್ವಣಾಧಿಕಾರಿ ರಾಹುಲ್‌ ಜೊಹ್ರಿ ಅವರಿಗೂ ನ್ಯಾ| ಜೈನ್‌ ಸೂಚಿಸಿದ್ದಾರೆ. ಗಂಗೂಲಿಯವರ ಸ್ವಹಿತಾಸಕ್ತಿ ಬಗ್ಗೆ ಆರೋಪಿಸಿ, ಪಶ್ಚಿಮ ಬಂಗಾಲದ ಭಾಸ್ವತಿ ಸಂತುವಾ, ರಂಜಿತ್‌ ಸೀಲ್‌ ಮತ್ತು ಅಭಿಜಿತ್‌ ಮುಖರ್ಜಿ ಅವರು, ಬಂಗಾಲ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಗಂಗೂಲಿಯವರನ್ನು ಡೆಲ್ಲಿ ತಂಡದ ಮಾರ್ಗದರ್ಶಕರಾಗಿ ಅನುವು ಮಾಡಿರುವ ಬಗ್ಗೆ ಆಕ್ಷೇಪಿಸಿದ್ದರು.

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಗಂಗೂಲಿ ಸಿಎಸಿ ಸದಸ್ಯತ್ವವನ್ನು ತೊರೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next