Advertisement

ಬಂಗಲೆಗೆ ಸೌಂಡ್‌ಪ್ರೂಫ್!

11:38 PM Jun 30, 2019 | Team Udayavani |

ಹೊಸದಿಲ್ಲಿ: ಇಲ್ಲಿನ ಜನಪ್ರಿಯ ಸಭಾಭವನದಿಂದಾಗಿ ಶಬ್ದಮಾಲಿನ್ಯ ಉಂಟಾಗುತ್ತಿದೆ ಎಂದು ಸ್ಥಳೀಯರು ದೂರಿದ ಅನಂತರದಲ್ಲಿ ಈಗ ಇಡೀ ಸಭಾಂಗಣವನ್ನು ಸೌಂಡ್‌ಪ್ರೂಫ್ ಮಾಡಲು ಕೇಂದ್ರದ ಲೋಕೋಪಯೋಗಿ ಸಚಿವಾಲಯ ಚಿಂತನೆ ನಡೆಸಿದೆ.

Advertisement

ಅಶೋಕ ರಸ್ತೆಯಲ್ಲಿರುವ ಬಂಗಲೆ ಸಂಸದರು ಮತ್ತು ಸಚಿವರ ನಿವಾಸಗಳಿಗೆ ಸಮೀಪದಲ್ಲಿದೆ. ಇದು ವಿವಾಹ ಮತ್ತು ಇತರ ಪಾರ್ಟಿಗಳಿಗೆ ಜನಪ್ರಿಯ ತಾಣವಾಗಿದೆ. ಮದುವೆ ಹಾಗೂ ಇತರ ಸಮಾರಂಭಗಳಲ್ಲಿ ಗದ್ದಲ ಉಂಟಾಗುವುದರಿಂದ, ನೆರೆಹೊರೆಯವರು ದೂರುತ್ತಿದ್ದಾರೆ. ಇಲ್ಲಿ ಧ್ವನಿಯ ಪ್ರಮಾಣ ಅಳೆದು, ಅನಂತರ, ಸೌಂಡ್‌ಪ್ರೂಫ್ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next