Advertisement

Bengaluru ದಕ್ಷಿಣದಿಂದ ಸೌಮ್ಯಾರೆಡ್ಡಿ ಸ್ಪರ್ಧೆ ಖಚಿತ: ರಾಮಲಿಂಗಾರೆಡ್ಡಿ

11:57 PM Mar 13, 2024 | Team Udayavani |

ಬೆಂಗಳೂರು: ಬೆಂಗಳೂರು ದಕ್ಷಿಣದಿಂದ ಸೌಮ್ಯಾರೆಡ್ಡಿ ಸ್ಪರ್ಧೆಗೆ ಸಿಎಂ, ಡಿಸಿಎಂ ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಸಹಿತ ಹಲವು ನಾಯಕರು ಒತ್ತಡ ಹಾಕಿದ್ದಾರೆ. ಸೌಮ್ಯಾರನ್ನು ನಿಲ್ಲಿಸಿ, ನಾವು ಗೆಲ್ಲಿಸುತ್ತೇವೆ ಎನ್ನುವ ಆಶಯವನ್ನು ಅನೇಕರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸೌಮ್ಯಾ ರೆಡ್ಡಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಖಚಿತಪಡಿಸಿದರು.

Advertisement

ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಡೆದಿರುವ ಮತ ಎಣಿಕೆ ಪ್ರಕ್ರಿಯೆಯನ್ನು ಪ್ರಶ್ನಿಸಿರುವ ಅರ್ಜಿ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು ಸದ್ಯದಲ್ಲೇ ತೀರ್ಪು ಬರುವ ನಿರೀಕ್ಷೆ ಇದೆ. ಒಂದು ವೇಳೆ ಮರು ಎಣಿಕೆ ನಡೆದರೆ ಶೇ.100ರಷ್ಟು ನಮ್ಮ ಪರವಾಗಿ ಫ‌ಲಿತಾಂಶ ಬರಲಿದೆ. ಹೀಗಾಗಿ ಲೋಕಸಭೆ ಚುನಾವಣೆ ಬಗ್ಗೆ ಯೋಚನೆ ಮಾಡಿರಲಿಲ್ಲ ಎಂದರು.

ಈಗಾಗಲೇ ಜಯನಗರ, ಬಿಟಿಎಂ ಬಡಾವಣೆ, ಬಸವನಗುಡಿ, ಬೊಮ್ಮನಹಳ್ಳಿ ಸಹಿತ 6 ವಿಧಾನಸಭಾ ಕ್ಷೇತ್ರಗಳ ಪ್ರಮುಖರೊಂದಿಗೆ ಸಭೆ ನಡೆಸಿದ್ದು, ಸೌಮ್ಯಾರನ್ನು ನಿಲ್ಲಿಸಿ, ನಾವು ಗೆಲ್ಲಿಸಿಕೊಂಡು ಬರುತ್ತೇವೆ ಎನ್ನುವ ಭರವಸೆ ನೀಡಿದ್ದಾರೆ ಎಂದರು.

ಎಂ.ಕೃಷ್ಣಪ್ಪ ಗರಂ
ಬೆಂಗಳೂರು ದಕ್ಷಿಣ ಅಥವಾ ಉತ್ತರದಿಂದ ಕಾಂಗ್ರೆಸ್‌ನಿಂದ ಪ್ರಿಯಾಕೃಷ್ಣ ಅವರನ್ನು ಕಣಕ್ಕಿಳಿಸುವ ಆಶಯ ಹೊಂದಿದ್ದ ಶಾಸಕ ಎಂ.ಕೃಷ್ಣಪ್ಪ, ನಮಗೇನೂ ಸೂಚನೆ ಬಂದಿಲ್ಲ. ನಾವು ತಲೆಕೆಡಿಸಿಕೊಂಡಿಲ್ಲ. ಸುರ್ಜೇವಾಲ ಅವರು ಈ ಬಗ್ಗೆ ಚರ್ಚಿಸಿಲ್ಲ. ಹೀಗಾಗಿ ಈ ಬಗ್ಗೆ ಮಾತನಾಡುವುದು ಅಪ್ರಸ್ತುತ. ನನಗೆ ಮಂತ್ರಿ ಸ್ಥಾನ ಕೊಡಬೇಕಿತ್ತು. ಯಾರ ಧರ್ಮಕ್ಕೆ ಕೊಡುತ್ತಾರೆ. ಕೊಟ್ಟಿಲ್ಲ ಅಷ್ಟೇ ಎಂದು ಅಸಮಾಧಾನ ಹೊರಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next