Advertisement

ಭತ್ತಕ್ಕೆ ವೈಜ್ಞಾನಿಕ ಬೆಲೆ ನೀಡಿ

06:40 PM May 17, 2020 | Naveen |

ಸೊರಬ: ಅನಾನಸ್‌, ಜೋಳ ಹಾಗೂ ಭತ್ತಕ್ಕೆ ವೈಜ್ಞಾನಿಕ ಬೆಲೆ ನೀಡಿ ಸರ್ಕಾರ ಖರೀದಿ ಮಾಡಬೇಕು ಎಂದು ಒತ್ತಾಯಿಸಿ ತಾಲೂಕು ರೈತ ಸಂಘದ ವತಿಯಿಂದ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ತಾಲೂಕಿನಲ್ಲಿ 80 ಸಾವಿರ ಟನ್‌ ಗಿಂತ ಹೆಚ್ಚು ಅನಾನಸ್‌ ಬೆಳೆ ಹಾಳಾಗಿದ್ದಲ್ಲದೆ ಈಗ ವ್ಯಾಪಾರಸ್ಥರು ಒಂದು ಕೆಜಿ ಅನಾನಸ್‌ಗೆ 2ರಿಂದ 3 ರೂಪಾಯಿಗೆ ಕೇಳುತ್ತಿದ್ದಾರೆ. ಒಂದು ಸಸಿ ಅನಾನಸ್‌ಗೆ ರೈತ 15 ರೂಪಾಯಿ ಖರ್ಚು ಮಾಡಿದ್ದಾನೆ. ನೂರಾರು ಎಕರೆ ಜಮೀನಿನಲ್ಲಿ ಬಂಡವಾಳ ಹಾಕಿ ಬೆಳದ ಬೆಳೆಗೆ ಬೆಲೆ ಸಿಗುತ್ತಿಲ್ಲ ಬೆಳೆ ನಷ್ಟವಾಗಿದೆ ಇದರಿಂದ ರೈತನ ಬದುಕು ಬೀದಿಗೆ ಬರುವಂತಾಗಿದೆ. ಕೂಡಲೇ ಸರ್ಕಾರ ಅಧಿಕಾರಿಗಳ ಮೂಲಕ ಅನಾನಸ್‌ ಖರೀದಿಗೆ ಅವಕಾಶ ನೀಡಬೇಕು. ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕು. ಅಲ್ಲದೆ ಜೋಳ ಹಾಗೂ ಭತ್ತದ ಬೆಲೆ ಕೂಡ ಕುಸಿದಿದ್ದು, ಸರ್ಕಾರ ಭತ್ತಕೆ 3000, ಜೋಳಕ್ಕೆ 2500 ಬೆಲೆ ನಿಗದಿ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ತಾಲೂಕ ರೈತ ಸಂಘದ ಅಧ್ಯಕ್ಷ ಈಶ್ವರಪ್ಪ ಕೊಡಕಣಿ, ಕಾರ್ಯದರ್ಶಿ ಬಲಿಂದ್ರಪ್ಪ, ರೈತ ಮುಖಂಡ ಉಮೇಶ್‌ ಪಾಟೀಲ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next