Advertisement

ಶಾಶ್ವತ ಕುಡಿವ ನೀರಿನ ನೀಲನಕ್ಷೆ ಸಿದ್ಧ

04:42 PM Jun 29, 2020 | Naveen |

ಸೊರಬ: ಭವಿಷ್ಯದ ದೃಷ್ಟಿಯಿಂದ ಪಟ್ಟಣಕ್ಕೆ ಹೊಂದಿಕೊಂಡಿರುವ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ 10 ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರಿಗಾಗಿ ನೀಲನಕ್ಷೆ ತಯಾರಿಸಲಾಗಿದೆ ಎಂದು ಶಾಸಕ ಕುಮಾರ್‌ ಬಂಗಾರಪ್ಪ ಹೇಳಿದರು.

Advertisement

ಪಟ್ಟಣ ಸಮೀಪದ ಕುಣಜಿಬೈಲು ಗ್ರಾಮದ ರಸ್ತೆ ನಿರ್ಮಾಣ ಕುರಿತು ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ನಂತರ ಸುದ್ದಗಾರರೊಂದಿಗೆ ಮಾತನಾಡಿದರು. ಕೊಡಕಣಿ ಹಾಗೂ ಹಿರೇಶಕುನ ಗ್ರಾಮ ವ್ಯಾಪ್ತಿಯ ಸರ್ಕಾರಿ ಜಮೀನಿನಲ್ಲಿ ಸರ್ಕಾರಿ ಕಟ್ಟಡ ಹಾಗೂ ನೌಕರರಿಗೆ ಕೊಠಡಿ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಸರ್ವೇ ಕಾರ್ಯ ಮಾಡಲಾಗಿದೆ ಎಂದರು.

ಪಪಂ ಮುಖ್ಯಾಧಿಕಾರಿ ಜಗದೀಶ್‌ ನಾಯ್ಕ, ಇಂಜನಿಯರ್‌ ಪ್ರದೀಪ್‌, ಪಿ.ಸಿ. ಪ್ರಮೋದ್‌, ಶೆಲ್ಜಾ, ಪಪಂ ಸದಸ್ಯ ಎಂ.ಡಿ.ಉಮೇಶ್‌, ಪ್ರಮುಖರಾದ ಕೃಷ್ಣಮೂರ್ತಿ ಕೊಡಕಣಿ, ಹೂವಪ್ಪ ಕೊಡಕಣಿ, ದೇವೇಂದ್ರಪ್ಪ ಮಾವಲಿ, ಚೇತನ್‌, ಪ್ರಭು, ಅಶೋಕ್‌, ಆಟೊ ಶಿವು, ಹನುಮಂತಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next