Advertisement

ಶೀಘ್ರ ಉದ್ಘಾಟನೆ: ಮಠಂದೂರು

12:07 PM Apr 06, 2022 | Team Udayavani |

ಪುತ್ತೂರು: ಮಂಜಲ್ಪಡು ಕಿರಿದಾದ ತಿರುವು ರಸ್ತೆಯನ್ನು ಅಗಲಗೊಳಿಸಿ ಚತುಷ್ಪಥ ರಸ್ತೆ ಮಾಡುವ ಮೂಲಕ ವಾಹನ ಸವಾರರಿಗೆ ಪ್ರಯಾಣ ಮಾಡಲು ಅನುಕೂಲ ಒದಗಿಸಲಾಗುತ್ತಿದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇಗುಲ ಜಾತ್ರೆ ಸಂದರ್ಭದಲ್ಲಿ ರಸ್ತೆ ಮತ್ತು ಸೇತುವೆ ಉದ್ಘಾಟನೆಯನ್ನು ನಗರಸಭೆ ಮತ್ತು ಲೋಕೋಪಯೋಗಿ ಇಲಾಖೆ ಮಾಡಲಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

Advertisement

ನಗರಸಭೆಯ 18 ಲಕ್ಷ ರೂ. ಮತ್ತು ಲೋಕೋಪಯೋಗಿ ಇಲಾಖೆಯ 1 ಕೋಟಿ ರೂ. ವೆಚ್ಚದಲ್ಲಿ ಬೊಳುವಾರು ಸಮೀಪದ ಮಂಜಲ್ಪಡುವಿನಿಂದ ಪುತ್ತೂರು ಪೇಟೆ ಸಂಪರ್ಕ ಸೇತುವೆ ವಿಸ್ತರಣೆ ಹಾಗೂ ಚತುಷ್ಪಥ ರಸ್ತೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಪರಿಶೀಲಿಸಿ ಅವರು ಮಾತನಾಡಿದರು.

ನಗರಸಭೆ ಅಧ್ಯಕ್ಷ ಕೆ.ಜೀವಂಧರ್‌ ಜೈನ್‌, ನಗರಸಭೆ ಸದಸ್ಯ ಸಂತೋಷ್‌ ಬೊಳುವಾರು, ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ಪ್ರಮೋದ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next