Advertisement

ಪುನೀತ್‌ ರಾಜಕುಮಾರ್‌ ಕಂಠಸಿರಿಯಲ್ಲಿ “ಬಾಡಿ ಗಾಡ್‌’ಸಾಂಗ್‌

04:31 PM Feb 16, 2022 | Team Udayavani |

ಈ ಹಿಂದೆ “ಮೊಗ್ಗಿನ ಮನಸ್ಸು’ ಮತ್ತು “ಓ ಪ್ರೇಮವೇ’ ಚಿತ್ರದಲ್ಲಿ ನಟಿಸಿದ್ದ ಮನೋಜ್‌ ಈಗ “ಬಾಡಿಗಾಡ್‌’ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದ್ದಾರೆ. ಇನ್ನು ತಮ್ಮ ಸಂಭಾಷಣೆ ಮತ್ತು ನಿರ್ದೇಶನದಲ್ಲಿ ಸಿನಿಪ್ರಿಯರ ಮನಮುಟ್ಟುತಿದ್ದ ಗುರುಪ್ರಾಸಾದ್‌ ಈಗ “ಬಾಡಿಗಾಡ್‌’ ಚಿತ್ರದಲ್ಲಿ ನಟನೆಯ ಮೂಲಕವೂ ಮನಮುಟ್ಟಲಿದ್ದಾರೆ.

Advertisement

“ಜೀವ’, “ಪಾರಿಜಾತ’, “ಗಣಪ’, “ಕರಿಯ 2′ ಮೊದಲಾದ ಚಿತ್ರಗಳಿಗೆ ನಿರ್ದೇಶನ ಮಾಡಿದ್ದ ಪ್ರಭು ಶ್ರೀನಿವಾಸ್‌ ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ನಿರ್ಮಾಣವನ್ನು ಮಾಡಿರೆ.

“ಬಾಡಿ ಗಾಡ್‌’ ಪ್ರಭು ಶ್ರೀನಿವಾಸ್‌ ನಿರ್ದೇಶನದ ಐದನೇ ಚಿತ್ರವಾಗಿದ್ದು, ಇದೊಂದು ಬ್ಲಾಕ್‌ ಹ್ಯೂಮರ್‌ ವಿತ್‌ ಥ್ರಿಲ್ಲರ್‌ ಕಥೆಯಾಗಿದೆ ಎಂಬುದು ಚಿತ್ರದ ಕಥಾಹಂದರದ ಬಗ್ಗೆ ಚಿತ್ರತಂಡದ ಮಾತು. ಇನ್ನು ಈ ಚಿತ್ರದಲ್ಲಿ ಮಠ ಗುರು ಪ್ರಸಾದ್‌, ಸತ್ತಮೇಲೂ ಮಾತನಾಡುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಚಿತ್ರದಲ್ಲಿ ಗುರುಪ್ರಸಾದ್‌ ಅವರನ್ನು ನೋಡಿಕೊಳ್ಳಲೂ ಬಂದ ಮನೋಜ್‌ಗೆ ಹಣದ ಸಮಸ್ಯೆ ಇದ್ದು ಸುಳ್ಳಿಂದ ಸುಳ್ಳುಗಳ ಸರಮಾಲೆ ಕಟ್ಟಿ ಬದುಕು ಸಮಸ್ಯೆಗಳ ಸುಳಿಯೊಳಗೆ ಸಿಲುಕಿಕೊಳ್ಳುತ್ತದೆಯಂತೆ. ಮುಂದೇನಾಗುತ್ತದೆ ಅನ್ನೋದು ಚಿತ್ರದ ಕ್ಲೈಮ್ಯಾಕ್ಸ್‌ ಎನ್ನುತ್ತದೆ ಚಿತ್ರತಂಡ.

“ಬಾಡಿ ಗಾಡ್‌’ ಚಿತ್ರದಲ್ಲಿ ನಟವಟ ನಟಿ ದೀಪಿಕಾ ಆರಾಧ್ಯ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಪದ್ಮಜರಾವ್‌ ಚಿತ್ರದ ಮತ್ತೂಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ಬಾಡಿಗಾಡ್‌’ ಚಿತ್ರದ ಹಾಡುಗಳಿಗೆ ಕರಣ್‌ ಬಿ ಕೃಪಾ ಸಂಗೀತ ಸಂಯೋಜಿಸುತ್ತಿದ್ದು, ದಿವಂಗತ ನಟ ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ “ಬಾಡಿ ಗಾಡ್‌’ ಚಿತ್ರದ “ಆರೇಸ ಡಂಕಣಕ’ ಎಂಬ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next