Advertisement

ದುಡ್ಡು ಕೊಟ್ಟಿಲ್ಲವೆಂದು ಪಾರ್ಶ್ವವಾಯು ಪೀಡಿತ ತಂದೆ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ ಮಗ

10:46 AM May 27, 2021 | Team Udayavani |

ಚಿಕ್ಕಮಗಳೂರು: ಖರ್ಚಿಗೆ ಹಣ ನೀಡಿಲ್ಲ ಎಂದು ಆರೋಪಿಸಿ ತನ್ನ ಪಾರ್ಶ್ವವಾಯು ಪೀಡಿತ ತಂದೆಗೆ ಕೊಡಲಿಯಿಂದ ಹೊಡೆದು ಮಗ ಹಲ್ಲೆ ಮಾಡಿದ ಘಟನೆ ಜಿಲ್ಲೆ ಮೂಡಿಗೆರೆ ತಾಲೂಕಿನ ಚನ್ನಡ್ಲುವಿನಲ್ಲಿ ನಡೆದಿದೆ.

Advertisement

ನಿಖೇಶ್ ಎಂಬಾತ ಕೊಡಲಿಯಿಂದ ಹಲ್ಲೆ ಮಾಡಿದ ಆರೋಪಿ. ಸುಂದರ ಪೂಜಾರಿ ಗಾಯಗೊಂಡಿರುವವರು.

ಸುಂದರ್ ಪೂಜಾರಿಯವರು ಇಬ್ಬರು ವಿಶೇಷ ಚೇತನ ಮಕ್ಕಳು, ಪತ್ನಿ ಜೊತೆ ವಾಸವಿದ್ದರು. ನಿಖೇಶ್ಈ ಸುಂದರ ಪೂಜಾರಿ ಹಿರಿಯ ಮಗ. ವಿಶೇಷ ಚೇತನ ಸಹೋದರ, ಸಹೋದರಿ ಬಿಟ್ಟು ನಿಖೇಶ್ ಬೆಂಗಳೂರು ಸೇರಿದ್ದ. ಆದರೆ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಒಂದು ತಿಂಗಳ ಹಿಂದೆ ಗ್ರಾಮಕ್ಕೆ ಆಗಮಿಸಿದ್ದ.

ಇದನ್ನೂ ಓದಿ:ರಕ್ತದ ಮಡುವಿನಲ್ಲಿ ಒದ್ದಾಟ ನಡೆಸಿದ ಆರೋಗ್ಯಾಧಿಕಾರಿ: ಅಲ್ಲೇ ಇದ್ದರೂ ನೆರವಿಗೆ ಬಾರದ ಶಾಸಕ

ಬುಧವಾರ ಸಂಜೆ ಹಣ ನೀಡುವಂತೆ ನಿಖೇಶ್ ತನ್ನ ತಂದೆ-ತಾಯಿಯನ್ನು ಪೀಡಿಸಿದ್ದ. ಆದರೆ ಹಣ ನೀಡದ್ದಕ್ಕೆ ಕುಪಿತಗೊಂಡು ತಂದೆಗೆ ಕೊಡಲಿಯೇಟು ನೀಡಿ ಮಾರಾಣಾಂತಿಕವಾಗಿ ಗಾಯಗೊಳಿಸಿದ್ದಾನೆ.

Advertisement

ಬಾಳೂರು ಪೊಲೀಸರು ಸ್ಥಳಕ್ಕೆ ಆಗಮಸಿದ್ದು, ಆರೋಪಿ ನಿಖೇಶ್ ನನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next