Advertisement

ಸೋಮವಾರಪೇಟೆ: ಅರೆಸೇನಾ ಸಿಬಂದಿಯಿಂದ ಲಾಠಿ ಪ್ರಹಾರ

12:01 AM May 11, 2023 | Team Udayavani |

ಸೋಮವಾರಪೇಟೆ: ಮಡಿಕೇರಿ ಕ್ಷೇತ್ರದ ಮಾದಾಪುರ ಮತಗಟ್ಟೆಯ ಗೊಂದಲದಿಂದ ಕೆಲ ಕಾಲ ಮತದಾನಕ್ಕೆ ತೊಡಕುಂಟಾಯಿತು.

Advertisement

ಮತದಾನಕ್ಕೆ ಕಾಯ್ದು ಬಳಲಿದ್ದ ಮತದಾರರು ಕುಡಿಯುವ ನೀರಿಗಾಗಿ ಪರದಾಡಿ ತಾಳ್ಮೆ ಕಳೆದುಕೊಂಡರು. ಈ ಸಂದರ್ಭ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಅರೆಸೇನಾ ಪಡೆಯ ಸಿಬಂದಿ ಲಾಠಿ ಬೀಸಿದ ಪರಿಣಾಮ ನಿವೃತ್ತ ಯೋಧರು ಸೇರಿದಂತೆ ಹಲವು ಮಂದಿಗೆ ಗಾಯಗಳಾದವು.

ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಅರೆಸೇನಾ ಪಡೆಯ ಸಿಬಂದಿಯನ್ನು ಹೊರಗೆ ಕಳುಹಿಸಬೇಕು ಹಾಗೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು. ಇಲ್ಲದಿದ್ದರೆ ಮತದಾನ ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದರು. ತಹಶೀಲ್ದಾರ್‌ ನರಗುಂದ್‌ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರಾದರೂ ಜನರ ಒತ್ತಾಯಕ್ಕೆ ಮಣಿದು ರಕ್ಷಣ ಪಡೆಯನ್ನು ಹೊರಕ್ಕೆ ಕಳುಹಿಸಿದರು.

ಮತದಾನ ಕೇಂದ್ರದ ಒಳಗೆ ಮೊಬೈಲ್‌ ನಿಷೇಧ ಇದ್ದರೂ ರಾಷ್ಟ್ರೀಯ ಪಕ್ಷದ ತಾಲೂಕಿನ ಪ್ರಮುಖ ಹುದ್ದೆಯಲ್ಲಿರುವ ವ್ಯಕ್ತಿಯೋರ್ವರು ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿರುವುದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next