Advertisement
ಸಾವಿರಾರು ಜನರು ತಿನ್ನುವ ಆಹಾರವನ್ನು ಸಿಸಿ ಟಿವಿ ಕಣ್ಗಾವಲಿನಲ್ಲಿಯೇ ತಯಾರಿಸಬೇಕು. ಯಾವ ಪ್ರಸಾದ, ಎಷ್ಟು ಜನರಿಗೆ ಎಂಬ ಮಾಹಿತಿ ಕೊಡಬೇಕು. ಇದಕ್ಕಾಗಿ ಸಂಬಂಧಿತ ಅಧಿಕಾರಿಯಿಂದ ಪೂರ್ವಾನುಮತಿ ಪಡೆದು, ಆಹಾರ ನಿರೀಕ್ಷಕರಿಂದ ಆಹಾರ ಪರೀಕ್ಷಿಸಿಯೇ ಜನರಿಗೆ ಕೊಡುವುದರಿಂದ ಪ್ರಸಾದ, ದಾಸೋಹ ಇನ್ನಷ್ಟು ಹೆಚ್ಚು ಸುರಕ್ಷಿತಗೊಳ್ಳಲಿದೆ. ಇತ್ತೀಚೆಗೆ ನಡೆದ ಸುಳ್ವಾಡಿಯ ಕಿಚ್ಗುತ್ ಮಾರಮ್ಮ ದೇವಸ್ಥಾನದಲ್ಲಿ ನಡೆದ ದುರ್ಘಟನೆ ಮರುಕಳಿಸುವುದಿಲ್ಲ. ಸರ್ಕಾರದ ಈ ನಿರ್ಧಾರ ಸ್ವಾಗತಾರ್ಹ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Related Articles
Advertisement
ದಾಸೋಹ, ಪ್ರಸಾದ ತಯಾರಿಕೆಗೆ ಸಂಬಂಧಿಸಿ ಸರ್ಕಾರ ವಿಧಿ ಸಿರುವ ಮುಂಜಾಗ್ರತಾ ಸುರಕ್ಷಾ ಕ್ರಮಗಳು ಸರಿಯಾಗಿವೆ. ಎಲ್ಲರೂ ಇದನ್ನು ಕಡ್ಡಾಯವಾಗಿ ಪಾಲಿಸಬೇಕು. ಆಗ ಸಾವಿರಾರು ಜನರು ತಿನ್ನುವ ಆಹಾರದ ಗುಣಮಟ್ಟ, ಸುರಕ್ಷತೆ ಹಾಗೂ ಶುಚಿತ್ವದ ಪಾಲನೆಯಾಗುತ್ತದೆ. ಗಣ್ಯ ವ್ಯಕ್ತಿಗಳು ಊಟ ಮಾಡುವ ಆಹಾರ ಪರೀಕ್ಷಿಸಲಾಗುತ್ತದೆ. ಸಾಮಾನ್ಯರು ಭಕ್ತಿಯ ಹೆಸರಲ್ಲಿ ತಿನ್ನುವ ಪ್ರಸಾದ ಅಧಿಕೃತವಾಗಿ ಪರೀಕ್ಷಿಸಿ ಕೊಡುವುದರಲ್ಲಿ ತಪ್ಪೇನಿಲ್ಲ.·ಮೃತ್ಯುಂಜಯ ಹಿರೇಮಠ ಶಾಸ್ತ್ರಿಗಳು,
ಪುರೋಹಿತರು ಪ್ರಸಾದ, ದಾಸೋಹ ತಯಾರಿಕೆ, ವಿತರಣೆಗೆ ನಿಯಮಗಳನ್ನು ಹೇರಿರುವ ಸರ್ಕಾರದ ಕ್ರಮ ಖಂಡನೀಯ. ಮಠಗಳಲ್ಲಿ ಹಲವು ಶತಮಾನಗಳ ದಾಸೋಹ ಪರಂಪರೆ ಇದೆ. ಮಠಗಳಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಿಯೇ ಅಡುಗೆ ಮಾಡಲಾಗುತ್ತದೆ. ಹೀಗಾಗಿ ಪ್ರಸಾದ, ದಾಸೋಹ ಬಗ್ಗೆ ಜನರಲ್ಲಿರುವ ಭಾವನೆಯೇ ಬೇರೆ. ಸರ್ಕಾರ ನಿಯಮಗಳನ್ನು ಹೇರುವುದರಿಂದ ಭಕ್ತರ ಭಾವನೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಸರ್ಕಾರ ತನ್ನ ಅಧೀನದಲ್ಲಿರುವ ದೇವಸ್ಥಾನಗಳ2ಲ್ಲಿ ಈ ನಿಯಮ ಅನುಷ್ಠಾನಕ್ಕೆ ತರಬಹುದು. ಖಾಸಗಿ ಮಠ, ಮಂದಿರ ಹಾಗೂ ವ್ಯಕ್ತಿಗಳಿಗೆ ಇದನ್ನು ಹೇರುವುದು ಸರಿಯಲ್ಲ.
·ಬಸವಶಾಂತಲಿಂಗ ಸ್ವಾಮೀಜಿ,
ಹೊಸಮಠ, ಹಾವೇರಿ ಮಠ, ಮಂದಿರಗಳು ಶ್ರದ್ಧಾ ಕೇಂದ್ರಗಳು. ಅಲ್ಲಿ ಭಕ್ತರು ಮತ್ತು ಮಠ, ಮಂದಿರ ನಡುವೆ ಭಾವನಾತ್ಮಕ ಸಂಬಂಧ ಇರುತ್ತದೆ. ಯಾವುದೋ ಒಂದು ದೇವಸ್ಥಾನದಲ್ಲಿ ನಡೆದ ದುರ್ಘಟನೆಯಿಂದ ಇಡೀ ವ್ಯವಸ್ಥೆಯನ್ನು ಅದೇ ದೃಷ್ಟಿಕೋನದಲ್ಲಿ ನೋಡುವುದು ತಪ್ಪು. ಸಾಧ್ಯವಾದರೆ ದಾಸೋಹ, ಪ್ರಸಾದ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲಿ. ನಿಯಮ ಪಾಲಿಸಲು ಒತ್ತಡ ಹೇರುವುದು ಸರಿಯಲ್ಲ.
·ಸದಾಶಿವ ಸ್ವಾಮೀಜಿ, ಹುಕ್ಕೇರಿಮಠ,
ಹಾವೇರಿ 20 ಅಂಶಗಳ ನಿಯಮ ಹೇರಿರುವುದು ಸೂಕ್ತವಲ್ಲ. ಪ್ರಸಾದ, ದಾಸೋಹದಲ್ಲಿ ವ್ಯತ್ಯಾಸವಾದರೆ ಅದಕ್ಕೆ ಪ್ರಸಾದ, ದಾಸೋಹ ವ್ಯವಸ್ಥೆ ನಿರ್ವಹಣೆ ಮಾಡುವವರನ್ನೇ ಹೊಣೆಗಾರರನ್ನಾಗಿಸುವ ನಿಯಮ ತಂದರೆ ಸಾಕು. ಪ್ರಸಾದ, ದಾಸೋಹ ಮಾಡುವ ಭಕ್ತಗಣಕ್ಕೆ ಪರವಾನಗಿ, ಪರೀಕ್ಷೆ ಎಂಬ ನಿಯಮ ಪಾಲನೆಯೇ ಹೊರೆಯಾಗುವ ಜತೆಗೆ ಈ ವಿಚಾರದಲ್ಲಿ ಭ್ರಷ್ಟಾಚಾರಕ್ಕೂ ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ.
·ಸತೀಶ ಕುಲಕರ್ಣಿ, ಹಿರಿಯ ಸಾಹಿತಿ,
ಹಾವೇರಿ ಎಚ್.ಕೆ. ನಟರಾಜ