Advertisement

“ಸುಳ್ಳು ಪತ್ರ ಬರೆದವರನ್ನು ದೇವರೇ ನೋಡ್ಕೊತಾನೆ’ : ಸೋಮಶೇಖರರೆಡ್ಡಿ

10:00 AM Jan 20, 2020 | sudhir |

ಬಳ್ಳಾರಿ: ಪೌರತ್ವ ಕಾಯ್ದೆ ತಿದ್ದುಪಡಿ ಜಾಗೃತಿ ಸಮಾವೇಶದಲ್ಲಿ ನಾನು ದೇಶದ್ರೋಹಿಗಳನ್ನು ಉದ್ದೇಶಿಸಿ ಮಾತನಾಡಿದ್ದೇನೆಯೇ ಹೊರತು ಯಾವುದೇ ಒಂದು ಕೋಮಿನವರನ್ನು ಉದ್ದೇಶಿಸಿ ಮಾತನಾಡಿಲ್ಲ. ಆದರೆ, ಇದನ್ನೇ ಮುಂದಿಟ್ಟುಕೊಂಡು ಕಿಡಿಗೇಡಿಗಳು ನನ್ನ ಹೆಸರು, ವಿಳಾಸವುಳ್ಳ ಸುಳ್ಳು ಪತ್ರವನ್ನು ರಾಜ್ಯಾದ್ಯಂತ ಹರಡಿಸುತ್ತಿದ್ದು ದೇವರೇ ಅವರನ್ನು ನೋಡಿಕೊಳ್ಳುತ್ತಾನೆ ಎಂದು ಶಾಸಕ ಜಿ. ಸೋಮಶೇಖರರೆಡ್ಡಿ ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಸಂಸದ ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲಿಬೆಲೆ ಅವರ ಕೊಲೆ ಪ್ರಯತ್ನ ನಡೆದಿದೆ. ಅವರು ನಮ್ಮ ಧರ್ಮವನ್ನು ರಕ್ಷಣೆ ಮಾಡುತ್ತಿದ್ದಾರೆ. ಧರ್ಮವನ್ನು ರಕ್ಷಿಸುವವರನ್ನು ಧರ್ಮವೇ ರಕ್ಷಿಸುತ್ತದೆ. ಹಾಗಾಗಿ ಅವರನ್ನು ಭಗವಂತ ರಕ್ಷಿಸುತ್ತಾನೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next