Advertisement

Udupi ಸೋಮಶೇಖರ ಭಟ್‌ ಪಂಚಭೂತಗಳಲ್ಲಿ ಲೀನ

10:54 PM Feb 05, 2024 | Team Udayavani |

ಉಡುಪಿ: ಬಿಜೆಪಿಯ ಹಿರಿಯ ಧುರೀಣ ಸೋಮಶೇಖರ ಭಟ್‌ ಅವರ ಅಂತ್ಯಸಂಸ್ಕಾರ ಸೋಮವಾರ ಬೀಡಿನಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.

Advertisement

ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕೆ ಕಾಡುಬೆಟ್ಟಿನಲ್ಲಿರುವ ಸ್ವಗೃಹದಲ್ಲಿ ಬೆಳಗ್ಗೆ ವ್ಯವಸ್ಥೆ ಮಾಡಲಾಗಿತ್ತು. ಆರೆಸ್ಸೆಸ್‌, ಬಿಜೆಪಿ ಸಹಿತವಾಗಿ ಸಂಘಪರಿವಾರದ ಪ್ರಮುಖರು, ಕುಟುಂಬದ ಸದಸ್ಯರು, ವಿವಿಧ ಕ್ಷೇತ್ರದ ಗಣ್ಯರು ಹಾಗೂ ಸಾರ್ವಜನಿಕರು ಅಂತಿಮ ದರ್ಶನ ಪಡೆದರು.

ಬಿಜೆಪಿಯ ಪ್ರಮುಖರು ಪಕ್ಷ ದ ಧ್ವಜವನ್ನು ಪಾರ್ಥಿವ ಶರೀರಕ್ಕೆ ಹೊದೆಸಿದರು. ಅನಂತರ ಬೀಡಿನಗುಡ್ಡೆಯಲ್ಲಿ ಕುಟುಂಬದ ಸದಸ್ಯರು ಅಂತಿಮ ಕ್ರಿಯಾ ವಿಧಿ ಪೂರೈಸಿದರು.

ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ದಾ.ಮ. ರವೀಂದ್ರ, ಪ್ರಾಂತ ಸಹ ಕಾರ್ಯವಾಹ ಪಿ.ಎಸ್‌. ಪ್ರಕಾಶ್‌, ವಿಭಾಗ ಸಂಘಚಾಲಕ್‌ ಡಾ| ನಾರಾಯಣ ಶೆಣೈ, ವಿಭಾಗ ಕಾರ್ಯವಾಹ ವಾದಿರಾಜ್‌, ಮಣಿಪಾಲ ಮೀಡಿಯಾ ನೆಟ್‌ವರ್ಕ್‌ ಲಿಮಿಟೆಡ್‌ನ‌ ಕಾರ್ಯನಿರ್ವಾಹಕ ಅಧ್ಯಕ್ಷರಾದ ಟಿ. ಸತೀಶ್‌ ಪೈ, ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ, ಅನೇಕ ನಾಯಕರು, ಜನಪ್ರತಿನಿಧಿಗಳು ಸಹಿತ ಅನೇಕರು ಅಂತಿಮ ದರ್ಶನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next