Advertisement

Soldier: ಪುತ್ರಿ ಜನ್ಮದಿನಕ್ಕಾಗಿ ಸ್ವಗ್ರಾಮಕ್ಕೆ ಬಂದಿದ್ದ ಯೋಧ ದುರ್ಮರಣ

04:21 PM Aug 15, 2023 | Team Udayavani |

ಕೆ.ಆರ್‌.ನಗರ: ತಾಲೂಕಿನ ಹೊಸಅಗ್ರಹಾರ ಗ್ರಾಮದ ರಾಮಶೆಟ್ಟಿ ಎಂಬುವವರ ಪುತ್ರ ವೀರಯೋಧ ಸುರೇಶ್‌ (40) ಹೃದಯಾಘಾತದಿಂದ ಸೋಮವಾರ ನಿಧನರಾದರು.

Advertisement

ಸುರೇಶ್‌ ಕಳೆದ 19 ವರ್ಷಗಳಿಂದ ಭಾರತೀಯ ಭೂಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಜಮ್ಮು-ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ನಾಯಕ್‌ ಸುಬೇದಾರ್‌ ಆಗಿ ಕಾರ್ಯನಿರ್ವಹಿಸುತಿದ್ದರು.  ಆ.2ರಂದು ರಜೆಯ ಮೇಲೆ ಸ್ವ-ಗ್ರಾಮಕ್ಕೆ ಬಂದಿದ್ದು, ಸೋಮವಾರ ತಮ್ಮ 5 ವರ್ಷದ ಪುತ್ರಿ ಪೃಕೃತಿಯ ಹುಟ್ಟು ಹಬ್ಬದ ನಿಮಿತ್ತ ಅನಾಥಾಶ್ರಮಕ್ಕೆ ತೆರಳಿ ಊಟವನ್ನು ಕೊಡಲು ಬೆಳಗ್ಗೆ 11 ಗಂಟೆಯ ಸಮಯದಲ್ಲಿ ಮನೆಯಿಂದ ಹೊರಟು ನಿಂತಿದ್ದಾಗ ಎದೆ ನೋವು ಬಂದು ಅಸ್ವಸ್ಥಗೊಂಡರು. ಕೂಡಲೇ  ಕೆ.ಆರ್‌.ನಗರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆಂದು ಪತ್ನಿ ಎ.ಎಂ.ಸೌಮ್ಯ ಪಟ್ಟಣದ ಆರಕ್ಷಕ ಠಾಣೆಗೆ ದೂರು ನೀಡಿದ್ದಾರೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಮೃತ ಸೈನಿಕನ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದರು. ಮೃತರು ಪತ್ನಿ ಸೌಮ್ಯ, ಪುತ್ರಿ ಪೃಕೃತಿ ಮತ್ತು ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next