Advertisement

ಮಳೆ ಗುಂಡಿಗೆ ಬಿದ್ದು ಯೋಧ ಸಾವು

01:11 PM Sep 10, 2019 | keerthan |

ಧಾರವಾಡ: ಧಾರಾಕಾರ ಸುರಿದ ಮಳೆಯಿಂದ ನಡುವೆ ನಿರ್ಮಾಣಗೊಂಡ ತಗ್ಗು ಗುಂಡಿಗೆ ಯೋಧನೊಬ್ಬ ಆಯತಪ್ಪಿ ಬಿದ್ದು ಸಾವನ್ನಪ್ಪಿದ ಘಟನೆ ಧಾರವಾಡ ಸಮೀಪದ ಮದಿಕೊಪ್ಪ ಸಮೀಪ ಸೋಮವಾರ ಸಂಜೆ ನಡೆದಿದೆ.

Advertisement

ಕಲ್ಲಾಪುರ ಗ್ರಾಮದ ವಿಠ್ಠಲ ಶೆಟಗಿ ಮೃತ ಯೋಧ.ಈತ ಕಳೆದ ಎಂಟು ವರ್ಷಗಳಿಂದ ಬಿಎಸ್ ಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಒಂದು ತಿಂಗಳ ರಜೆ ಮೇಲೆ ಗ್ರಾಮಕ್ಕೆ ಬಂದಿದ್ದ ಯೋಧ ಸೋಮವಾರ ಸಂಜೆ ಪಕ್ಕದ ತೇಗೂರು ಗ್ರಾಮಕ್ಕೆ ಕೆಲಸದ ನಿಮಿತ್ತ ಹೋಗಿದ್ದರು. ಮರಳಿ ಗ್ರಾಮಕ್ಕೆ ಬರುವಾಗ ಸಂಜೆಯಾಗಿತ್ತು.

ಮಬ್ಬುಗತ್ತಲಿನಲ್ಲಿ 20 ಅಡಿ ಗುಂಡಿಗೆ ಆಯತಪ್ಪಿ ಬಿದ್ದ ಯೋಧ ರಾಡಿ ನೀರಿನಲ್ಲಿ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next