Advertisement

ನಭೋಮಂಡಲದಲ್ಲಿ “ಕಂಕಣ ಸೂರ್ಯಗ್ರಹಣ”ಕೌತುಕ, ರಾಜ್ಯದ ಹಲವೆಡೆ ಗೋಚರ

12:33 PM Jun 21, 2020 | Nagendra Trasi |

ನವದೆಹಲಿ/ಬೆಂಗಳೂರು: ನವದೆಹಲಿ, ರಾಜಸ್ಥಾನ್, ಹರ್ಯಾಣ ಮತ್ತು ಉತ್ತರಾಖಂಡ್ ನಲ್ಲಿ ಜೂನ್ 21ರಂದು ಬೆಳಗ್ಗೆ ಆರಂಭಗೊಂಡ ಕಂಕಣ ಸೂರ್ಯಗ್ರಹಣ ಗೋಚರಿಸಿದೆ. ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಭಾಗಶಃ ಸೂರ್ಯಗ್ರಹಣ ಗೋಚರಿಸಿದೆ ಎಂದು ವರದಿ ತಿಳಿಸಿದೆ.

Advertisement

ಭಾರತ ಹೊರತುಪಡಿಸಿ ಈ ಸೂರ್ಯಗ್ರಹಣ ಕಾಂಗೋ, ಸೂಡಾನ್, ಇಥಿಯೋಪಿಯಾ, ಯೆಮೆನ್, ಸೌದಿ ಅರೇಬಿಯಾ, ಓಮಾನ್, ಪಾಕಿಸ್ತಾನ ಹಾಗೂ ಚೀನಾದಲ್ಲಿಯೂ ಗೋಚರವಾಗಿದೆ ಎಂದು ವರದಿ ವಿವರಿಸಿದೆ.

ದಿಲ್ಲಿ, ಮುಂಬೈ, ಕೋಲ್ಕತಾ, ಚೆನ್ನೈ, ಬೆಂಗಳೂರು ಸೇರಿದಂತೆ ಇತರೆಡೆ ಭಾಗಶಃ ಕಂಕಣ ಸೂರ್ಯಗ್ರಹಣ ಗೋಚರಿಸಿದೆ. ಮೊದಲ ಹಂತದ ಗ್ರಹಣ 2ಗಂಟೆ 2 ನಿಮಿಷಕ್ಕೆ ಮೋಕ್ಷವಾಗಲಿದ್ದು, ಭಾಗಶಃ ಸೂರ್ಯಗ್ರಹಣ 3.04 ನಿಮಿಷಕ್ಕೆ ಅಂತ್ಯವಾಗಲಿದೆ.

Advertisement

ಮೋಡ ಮುಸುಕಿದ ಹಾಗೂ ಮಳೆಯ ವಾತಾವರಣದಿಂದಾಗಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಕಂಕಣ ಸೂರ್ಯ ಗ್ರಹಣ ಕೌತುಕ ವೀಕ್ಷಣೆಗೆ ಅಡ್ಡಿಯಾಗಿದ್ದರೆ, ರಾಜ್ಯದ ಹಲವೆಡೆ ಖಂಡಗ್ರಾಸ ಸೂರ್ಯಗ್ರಹಣ ಗೋಚರವಾಗಿದೆ. ಭಾನುವಾರ(ಜೂನ್ 21) ಬೆಳಗ್ಗೆ 10 ಗಂಟೆ 5ನಿಮಿಷಕ್ಕೆ ಆರಂಭಗೊಂಡ ಈ ಖಂಡಗ್ರಾಸ ಗ್ರಹಣ ಮಧ್ಯಾಹ್ನ 1.31ರವರೆಗೆ ಗೋಚರಿಸಲಿದೆ. ಬರಿಗಣ್ಣಿನಿಂದ ಸೂರ್ಯಗ್ರಹಣ ವೀಕ್ಷಣೆ ಅಪಾಯಕಾರಿ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next