Advertisement

ಕಾಮಗಾರಿ ವೇಳೆ ಮಣ್ಣು ಕುಸಿತ: ಕಾರ್ಮಿಕ ಸಮಾಧಿ ; ನಾಲ್ವರ ರಕ್ಷಣೆ 

04:14 PM Oct 24, 2018 | |

ಬೆಂಗಳೂರು: ನಗರದ ಜಕ್ಕೂರಿನ ಭವ್ಯ ಲೇಔಟ್‌ನಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದ ವೇಳೆ ಭಾರೀ ಪ್ರಮಾಣದ ಮಣ್ಣು ಕುಸಿದು ಕಾರ್ಮಿಕನೊರ್ವ ದಾರುಣವಾಗಿ ಸಾವನ್ನಪ್ಪಿದ ಅವಘಡ ಬುಧವಾರ ನಡೆದಿದೆ.  

Advertisement

ಬೃಹತ್‌ ಪ್ರಮಾಣದಲ್ಲಿ  ಮಣ್ಣು ಕುಸಿದಿದ್ದು, ಐವರು ಸಿಲುಕಿಕೊಂಡಿದ್ದರು. ನಾಲ್ವರನ್ನು ಅಗ್ನಿ ಶಾಮಕ ದಳದ ಸಿಬಂದಿಗಳು ರಕ್ಷಿಸಿದ್ದಾರೆ. 

ಮೃತ ದುರ್‌ದೈವಿ ಕಾರ್ಮಿಕ ಶಿಡ್ಲಘಟ್ಟ ಮೂಲದ ಮಧುಸೂದನ್‌ ಎಂದು ತಿಳಿದು ಬಂದಿದೆ.

ರಕ್ಷಣೆಗೊಳಗಾದ ಕಾರ್ಮಿಕ ನಬೀಸಾಬ್‌ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next