Advertisement
ಇತ್ತೀಚೆಗೆ “ಗಂಡುಲಿ’ ಎಂಬ ಹೊಸಬರ ಚಿತ್ರಕ್ಕೆ ಮುಹೂರ್ತ ನಡೆಯಿತು. ಈ ಚಿತ್ರಕ್ಕೆ ವಿನಯ್ ರತ್ನಸಿದ್ಧಿ ನಾಯಕ ಕಮ್ ನಿರ್ದೇಶಕ. ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ವಿನಯ್ ರತ್ನಸಿದ್ಧಿ, ನಟನಾಗುವ ಆಸೆ ಕಂಡಿದ್ದರು. ಆರಂಭದಲ್ಲಿ ಡ್ಯಾನ್ಸ್, ನಟನೆ ಕಲಿತು ಕೋರಿಯೋಗ್ರಾಫರ್ ಆಗಿ ಒಂದು ಡ್ಯಾನ್ಸ್ ಕ್ಲಾಸ್ ಶುರುಮಾಡಿದರು. ಆ ಬಳಿಕ ಸಿನಿಮಾ ಪ್ರೀತಿ ಜಾಸ್ತಿಯಾಗಿ, “ಎಂಜಿನಿಯರ್’ ಮತ್ತು “ಕಿಲಾಡಿ’ ಎಂಬ ಚಿತ್ರ ನಿರ್ದೇಶಿಸಿ, ನಟಿಸಿದರು. ಈಗ “ಗಂಡುಲಿ’ಯಾಗುತ್ತಿದ್ದಾರೆ. ಅವರೇ ಹೇಳುವಂತೆ, “ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ. ನಾಯಕ ಚಿತ್ರದಲ್ಲಿ ರಾಜವಂಶದವನು. ಇಲ್ಲಿ ಮಾಸ್ ಎಲಿಮೆಂಟ್ಸ್ ಜೊತೆಗೆ ಪ್ರೀತಿ, ಪ್ರೇಮದ ಅಂಶಗಳೂ ಇವೆ. ಹಳ್ಳಿಯಲ್ಲಿ ವ್ಯವಸಾಯ ಮಾಡಿಕೊಂಡಿರುವ ಹೀರೋ, ಆ ಹಳ್ಳಿಯ ಅಭಿವೃದ್ಧಿಯತ್ತ ಗಮನಹರಿಸುತ್ತಾನೆ. ಬುದ್ಧಿವಂತ ಯುವಕರು ಮನಸ್ಸು ಮಾಡಿದರೆ ಹಳ್ಳಿಯನ್ನು ಏನು ಬೇಕಾದರೂ ಮಾಡಬಹುದು ಎಂಬ ಕಥೆಯೊಂದಿಗೆ ಚಿತ್ರ ಸಾಗಲಿದೆ’ ಎನ್ನುತ್ತಾರೆ ವಿನಯ್.
Advertisement
ಸಾಫ್ಟ್ವೇರ್ ಹುಲಿ!
06:00 AM Jul 13, 2018 | |
Advertisement
Udayavani is now on Telegram. Click here to join our channel and stay updated with the latest news.