Advertisement

ಕಾಲ್ಗುಣ ಸರಿ ಇಲ್ಲ ಎಂದು ಮದುವೆ ಮುರಿದ ವರ, ಮನನೊಂದ ವಧು ನೇಣಿಗೆ

11:31 AM Mar 01, 2017 | |

ಬೆಂಗಳೂರು : ವಿವಾಹ ನಿಶ್ಚಿತಾರ್ಥ ನಡೆದ ಬಳಿಕ ಯುವಕ ನೀನು ದುರಾದೃಷ್ಟವಂತೆ ಎಂದು ಮದುವೆ ನಿರಾಕರಿಸಿದ್ದರಿಂದ ತೀವ್ರವಾಗಿ ಮನನೊಂದ ಸಾಫ್ಟ್  ವೇರ್‌ ಇಂಜಿನಿಯರ್‌ ಒಬ್ಬಾಕೆ ನೇಣಿಗೆ ಶರಣಾದ ದಾರುಣ ಘಟನೆ ಮಂಗಳವಾರ ಸಂಜೆ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ. 

Advertisement

32 ವರ್ಷದ ನಾಗಲಕ್ಷ್ಮೀ ಎಂಬಾಕೆ ನೇಣಿಗೆ ಶರಣಾಗಿದ್ದು, ಈಕೆಗೆ ಕಳೆದ ವರ್ಷದ ಆರಂಭದಲ್ಲೇ ಕಾರ್ತಿಕ್‌ ಎನ್ನುವ ಸಾಫ್ಟ್  ವೇರ್‌ ಇಂಜಿನಿಯರ್‌ನೊಂದಿಗೆ ವಿವಾಹ ನಿಶ್ಚಿತಾರ್ಥವಾಗಿತ್ತು. ಕೆಲವೇ ದಿನಗಳಲ್ಲಿ  ಕಾರ್ತಿಕ್‌ನ ತಂದೆ ಅಪಘಾತದಲ್ಲಿ ಮೃತಪಟ್ಟಿದ್ದರಿಂದ ಮದುವೆಯನ್ನು ವರ್ಷದ ಕಾಲ ಮುಂದೂಡಲಾಗಿತ್ತು. ಈ ವರ್ಷ ಎರಡೂ ಕಡೆಯವರು ಮಾತುಕತೆ ನಡೆಸಿ ಮೇ 22 ರಂದು ಮಹೂರ್ತ ನಿಗದಿ ಪಡಿಸಿದ್ದರು. 

2 ದಿನಗಳ ಹಿಂದೆ ನೀನು ದುರಾದೃಷ್ಟವಂತೆ, ಕಾಲ್ಗುಣ ಸರಿ ಇಲ್ಲ ಎಂದು ಹೇಳಿ ಮದುವೆಗೆ ನಿರಾಕರಿಸಿದ ಯುವಕ ರಿಜಿಸ್ಟರ್ಡ್‌ ಪೋಸ್ಟ್‌ನಲ್ಲಿ  ಪತ್ರ ಕಳುಹಿಸಿದ್ದು,ಇದರಿಂದ ಯುವತಿ ತೀವ್ರವಾಗಿ ಮನನೊಂದು ನೇಣಿಗೆ ಶರಣಾಗಿದ್ದಾಳೆ. 

ಈ ಬಗ್ಗೆ ತೀವ್ರ ನೊಂದಿರುವ ನಾಗಲಕ್ಷ್ಮೀ ಮನೆಯವರು ಕಾರ್ತಿಕ್‌ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಗೆ ‌ ದೂರು ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next