Advertisement

ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಸಾಫ್ಟ್ಸ್ಕಿಲ್‌ ತರಬೇತಿ

10:47 PM Feb 23, 2020 | Team Udayavani |

ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಎಸ್‌ಸಿಪಿ, ಟಿಎಸ್‌ಪಿ ಯೋಜನೆ ಅನುದಾನದಲ್ಲಿ ಮೃದು ಕೌಶಲ್ಯ(ಸಾಫ್ಟ್ ಸ್ಕಿಲ್‌) ತರಬೇತಿ ನೀಡಲು ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿದೆ.

Advertisement

ಉದ್ಯೋಗಾವಕಾಶಕ್ಕೆ ಉತ್ತೇಜನ, ನವೋದ್ಯಮಕ್ಕೆ ಪ್ರೋತ್ಸಾಹ ಹಾಗೂ ಸ್ವ-ಉದ್ಯೋಗ ಸ್ಥಾಪನೆಗೆ ಅಗತ್ಯವಾದ ಆತ್ಮವಿಶ್ವಾಸ ವರ್ಧನೆಗೆ ಮೃದು ಕೌಶಲ್ಯ ತರಬೇತಿ ನೀಡಲಾಗುತ್ತದೆ. ವರ್ಬಲ್‌ ಮತ್ತು ನಾನ್‌ ವರ್ಬಲ್‌ ಸಂವಹನ, ವರದಿ ಬರೆಯುವುದು, ಪವರ್‌ ಪಾಯಿಂಟ್‌ ಪ್ರಸ್ತುತಿ, ರೆಸ್ಯೂಮ್‌ ಬರೆಯುವುದರ ಕುರಿತು ಈ ಯೋಜನೆಯಡಿ ಕಾರ್ಯಾಗಾರ ನಡೆಸಲಾಗುತ್ತದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಕೌಶಲ್ಯವೃದ್ಧಿಗೆ ಪೂರಕವಾದ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ಖರೀದಿಸು ವುದು, ಈ ವಿದ್ಯಾರ್ಥಿಗಳಿಗಾಗಿ ಸೆಮಿನಾರ್‌ ಹಾಲ್‌ ಅಥವಾ ಮೃದು ಕೌಶಲ್ಯ ಪ್ರಯೋಗಾಯವನ್ನು ರೂಪಿಸುವ ನಿಟ್ಟಿನಲ್ಲಿ ಪ್ರೊಜೆಕ್ಟರ್‌ಗಳನ್ನು ಖರೀದಿಸುವುದು,

ವಿವಿಧ ಸ್ಪರ್ಧೆ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಆಯೋಜನೆ, ಮುಕ್ತ ಸಂವಹನ, ಗೃಹಿಕ ಸಾಮರ್ಥ್ಯ ವೃದ್ಧಿ, ಸಕಾರತ್ಮಕ ಚಿಂತನೆ, ಜವಾ ಬ್ದಾರಿ ತೆಗೆದುಕೊಳ್ಳುವ ಕಲೆ, ಅಣಕು ಸಂದರ್ಶನ, ಗುರಿ ಖಚಿತಪಡಿಸುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಈ ಯೋಜನೆ ಯಡಿ ಕೈಗೊಳ್ಳಲು ಇಲಾಖೆಯಿಂದ ಸರ್ಕಾರಿ ಕಾಲೇಜುಗಳಿಗೆ ನಿರ್ದೇಶನ ನೀಡಲಾಗಿದೆ.

ತರಬೇತಿ ಕುರಿತು ಮಾಹಿತಿ, ಸ್ಪಷ್ಟೀಕರಣ ಪಡೆಯುವುದಕ್ಕಾಗಿ ರಾಜ್ಯಮಟ್ಟದಲ್ಲಿ ನೋಡಲ್‌ ಅಧಿಕಾರಿಯನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೆ, ಯಾವ ಮಾದರಿಯಲ್ಲಿ ತರಬೇತಿ ನಡೆಯಬೇಕು ಮತ್ತು ಅನುಸರಿಸಬೇಕಾದ ಕ್ರಮದ ಬಗ್ಗೆ ಸೂಚನೆಯನ್ನು ಇಲಾಖೆಯಿಂದ ನೀಡಲಾಗಿದೆ.

Advertisement

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಮೃದು ಕೌಶಲ್ಯ ವೃದ್ಧಿಗಾಗಿ ಬಿಡುಗಡೆ ಮಾಡಿದ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳಬಾರದೆಂಬ ಎಚ್ಚರಿಕೆಯನ್ನೂ ನೀಡಿದೆ. ಬೆಂಗಳೂರು ಪ್ರಾದೇಶಿಕ ಜಂಟಿ ನಿರ್ದೇಶಕ ಕಚೇರಿ ವ್ಯಾಪ್ತಿಯ 33 ಸರ್ಕಾರಿ ಪದವಿ ಕಾಲೇಜು, ಮೈಸೂರಿ ಪ್ರಾದೇಶಿಕ ಜಂಟಿ ನಿರ್ದೇಶಕ ಕಚೇರಿ ವ್ಯಾಪ್ತಿಯ 26 ಸರ್ಕಾರಿ ಪದವಿ ಕಾಲೇಜು,

ಶಿವಮೊಗ್ಗ ಪ್ರಾದೇಶಿಕ ಜಂಟಿ ನಿರ್ದೇಶಕ ಕಚೇರಿ ವ್ಯಾಪ್ತಿಯ 9 ಸರ್ಕಾರಿ ಪದವಿ ಕಾಲೇಜು, ಮಂಗಳೂರು ಪ್ರಾದೇಶಿಕ ಜಂಟಿ ನಿರ್ದೇಶಕ ಕಚೇರಿ ವ್ಯಾಪ್ತಿಯ 14 ಸರ್ಕಾರಿ ಪದವಿ ಕಾಲೇಜು ಹಾಗೂ ಧಾರವಾಡ ಪ್ರಾದೇಶಿಕ ಜಂಟಿ ನಿರ್ದೇಶಕ ಕಚೇರಿ ವ್ಯಾಪ್ತಿಯ 37 ಸರ್ಕಾರಿ ಪದವಿ ಕಾಲೇಜಿನ ಒಟ್ಟು 8560 ಪರಿಶಿಷ್ಟ ಜಾತಿ, 2328 ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಈ ಯೋಜನೆಯ ಲಾಭ ದೊರೆಯಲಿದೆ.

ಇದಕ್ಕಾಗಿ ಎಸ್‌ಸಿಪಿ ಯೋಜನೆಯಡಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಮೃದು ಕೌಶಲ್ಯ ವೃದ್ಧಿಗಾಗಿ 847865 ರೂ. ಹಾಗೂ ಪರಿಶಿಷ್ಟ ಪಂಡಗದ ವಿದ್ಯಾರ್ಥಿಗಳ ಮೃದು ಕೌಶಲ್ಯ ಕಾರ್ಯಕ್ರಮಕ್ಕಾಗಿ ಟಿಎಸ್‌ಪಿ ಯೋಜನೆಯಡಿ 397981 ರೂ. ಸೇರಿ ಒಟ್ಟು 1245846 ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಅನುದಾನವನ್ನು ಬಳಸಿಕೊಂಡು ಮೃದು ಕೌಶಲ್ಯವನ್ನು ಉತ್ತಮ ರೀತಿಯಲ್ಲಿ ಎಸ್ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ನೀಡಲು ನಿರ್ದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next