Advertisement

ಮಾನವೀಯ ಕಾರ್ಯಕ್ಕೆ ಮಿಡಿದ ಮನಗಳು

07:30 PM May 28, 2021 | Team Udayavani |

ವರದಿ: ಚಂದ್ರಶೇಖರ ಮೋರೆ

Advertisement

ಮಹಾಲಿಂಗಪುರ: ಕೊರೊನಾ ಸಂದಿಗ್ಧ ಸ್ಥಿತಿಯಲ್ಲಿ ಪಟ್ಟಣದ ಕೆಲ ಜನಪ್ರತಿನಿಧಿಗಳು, ಅಧಿಕಾರಿಗಳು, ಯುವಕ ಸಂಘದ ಕಾರ್ಯಕರ್ತರು ಕಡುಬಡವರಿಗೆ, ಕೊರೊನಾ ವಾರಿಯರ್ಗೆ, ಪೌರ ಕಾರ್ಮಿಕರಿಗೆ, ಲಾರಿ ಚಾಲಕರಿಗೆ ಊಟ- ಉಪಹಾರ, ಚಹಾ ವಿತರಿಸುವುದರ ಜತೆಗೆ ಮಾಸ್ಕ್, ಸ್ಯಾನಿಟೈಸರ್‌ ನೀಡುವ ಹಲವರ ಸಂಕಷ್ಟಕ್ಕೆ ನೆರವಾಗಿದ್ದಾರೆ.

ಬಿಜೆಪಿ ಯುವ ಮೋರ್ಚಾ, ಶಾಸಕ ಸಿದ್ದು ಸವದಿ ಅಭಿಮಾನಿ ಬಳಗ, ಯುವ ನಾಯಕ ರವಿ ಜವಳಗಿ ಅಭಿಮಾನಿ ಬಳಗ, ಭಾರತೀಯ ಸಂಸ್ಕೃತಿ ಗಾರ್ಮೆಂಟ್ಸ್‌, ಸ್ವಾಮಿ ವಿವೇಕಾನಂದ ಪ್ರತಿಷ್ಠಾನ ಸೇರಿದಂತೆ ವಿವಿಧ ಸಂಘಟನೆಗಳ ಹತ್ತಾರು ಯುವಕರು ಪುರಸಭೆ ಸದಸ್ಯ ರವಿ ಜವಳಗಿ ನೇತೃತ್ವದಲ್ಲಿ ಪ್ರತಿನಿತ್ಯ ಭಿಕ್ಷುಕರಿಗೆ, ನಿರ್ಗತಿಕರಿಗೆ, ಲಾರಿ ಚಾಲಕರಿಗೆ ಆಹಾರ ಪೊಟ್ಟಣ, ನೀರಿನ ಬಾಟಲ್‌ ವಿತರಿಸುತ್ತಿದ್ದಾರೆ. ಇದರ ಜತೆಗೆ ಕೆಲ ಸಂಘಟನೆಗಳು ಪಟ್ಟಣದ ಕೋವಿಡ್‌ ಸೆಂಟರ್‌ಗಳಲ್ಲಿ ಮೃತಪಟ್ಟ ಅನಾಥರ ಅಂತ್ಯ ಸಂಸ್ಕಾರ ನೆರವೇರಿಸುತ್ತಿವೆ.

ಪುರಸಭೆ ಸದಸ್ಯ ರವಿ ಜವಳಗಿ, ಮಹಾಲಿಂಗ ಕಂಕನವಾಡಿ, ನಂದು ಲಾತೂರ, ಸಂಗಮೇಶ ಅಂಬಲ್ಯಾಳ, ಹನಮಂತ ನಾವ್ಹಿ, ದತ್ತ ಯರಗಟ್ಟಿಕರ, ಸಾಗರ ಶಿಂಧೆ, ಬೈರೇಶ ಆದೆಪ್ಪನವರ, ಬಸು ಮಡಿವಾಳ, ಕೃಷ್ಣಾ ಕಳ್ಳಿಮನಿ, ಮಹಾಂತೇಶ ಶಿವಣಗಿ, ಪ್ರಕಾಶ ಕಳ್ಳಿಮನಿ, ಅಭಿಷೇಕ ಲಮಾಣಿ, ಚನ್ನು ಆರೇಗಾರ, ಯಲ್ಲಪ್ಪ ಬನ್ನೆನ್ನವರ, ಸಂದೀಪ ಮುಗಳಖೋಡ, ಹರೀಶ ಮಂಟೂರ, ಅನಿಲ ಕವಾಸಿ, ಅಭಿಷೇಕ ಸೊನ್ನದ, ಮಹಾಲಿಂಗ ದೇಸಾಯಿ ಸೇರಿ ಹಲವಾರು ಯುವಕರು ನಿರಂತರ ಸೇವಾ ಕಾರ್ಯದಲ್ಲಿ ತೊಡಗಿದ್ದಾರೆ.

ಸಿ.ಎಂ.ಹುರಕಡ್ಲಿ ಫೌಂಡೇಶನ್‌: ಪುರಸಭೆ ಮಾಜಿ ಉಪಾಧ್ಯಕ್ಷ ಚನ್ನಬಸು ಹುರಕಡ್ಲಿ ಕೊರೊನಾದಿಂದ ಸಂಕಷ್ಟಕ್ಕೊಳಗಾದವರಿಗೆ, ಕೊರೊನಾ ವಾರಿಯರ್ಗೆ ತಮ್ಮ ಹುರಕಡ್ಲಿ ಪ್ರತಿಷ್ಠಾನದ ಅಡಿಯಲ್ಲಿ ನೆರವಾಗಿದ್ದಾರೆ. ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯ ಗುತ್ತಿಗೆ ಹಿಡಿದು ಸ್ವತ್ಛತಾ ಕಾರ್ಯ ಕೈಗೊಂಡಿರುವ ಹೊರ ರಾಜ್ಯದ ಹತ್ತಾರು ಕುಟುಂಬಗಳಿಗೆ ಪಡಿತರ ಕಿಟ್‌ ವಿತರಿಸಿದ್ದಾರೆ. ಪತ್ನಿ ಪ್ರತಿನಿಧಿಸಿದ್ದ ವಾರ್ಡ್‌ 6 ಬಸವನಗರ ಮತ್ತು ವಿದ್ಯಾನಗರಗಳಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಸೋಡಿಯಂ ಪೋಕ್ಲೋರೈಡ್‌ ನ್ನು ಸಿಂಪಡಣೆ ಕೈಗೊಂಡಿದ್ದಾರೆ. ಜತೆಗೆ ಪೊಲೀಸರು, ಪುರಸಭೆ ಸಿಬ್ಬಂದಿ, ಪೌರ ಕಾರ್ಮಿಕರು, ಸರಕಾರಿ ಆಸ್ಪತ್ರೆ ಸಿಬ್ಬಂದಿಗೆ ಗುಣಮಟ್ಟದ ಮುಖರûಾ ಕವಚ, ಮಾಸ್ಕ್, ಸ್ಯಾನಿಟೈಸರ್‌, ಕನೇರಿ ಮಠದ ಶ್ರೀಗಳು ನೀಡಿದ ರೋಗನಿರೋಧಕ ಔಷಧ ಬಾಟಲಿಗಳನ್ನು ವಿತರಿಸಿದ್ದಾರೆ.

Advertisement

ಬಸವನಗರ-ವಿದ್ಯಾನಗರದ ಪ್ರತಿ ಮನೆಗೆ ನೀರಿನ ಡಬ್ಬಿ, ಕಸದ ಸಂಗ್ರಹಣೆಯ ಬಕೆಟ್‌, ಕಡು ಬಡವರಿಗೆ ಆಹಾರ ಕಿಟ್‌ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇಂತಹ ಸಮಯದಲ್ಲಿ ಬಡವರು- ನಿರ್ಗತಿಕರ ಸೇವೆ ಮಾಡುವುದು ಸೌಭಾಗ್ಯ ಎನ್ನುತ್ತಾರೆ ಸಮಾಜ ಸೇವಕ ಚನಬಸು ಹುರಕಡ್ಲಿ. ಕರ್ತವ್ಯದ ಜತೆ ಸೇವಾಕಾರ್ಯ: ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಎಚ್‌.ಎಸ್‌. ಚಿತ್ತರಗಿ, ಠಾಣಾಧಿಕಾರಿ ಜಿ.ಎಸ್‌. ಉಪ್ಪಾರ, ಸರಕಾರಿ ಆಸ್ಪತ್ರೆಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಬಿ.ಗೋಣಿ ಕೊರೊನಾ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಜಾಗೃತಿ ಮೂಡಿಸುವುದು, ತಿಳಿವಳಿಕೆ ನೀಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಠಾಣಾಧಿಕಾರಿ ಜಿ.ಎಸ್‌.ಉಪ್ಪಾರ ಪೊಲೀಸ್‌ ಇಲಾಖೆ ಒತ್ತಡದ ಕೆಲಸ ಕಾರ್ಯಗಳ ನಡುವೆಯೂ ಮಹಾಲಿಂಗೇಶ್ವರ ಗೋಶಾಲೆಗೆ ಮೇವು ಪೂರೈಸಿದ್ದಾರೆ. ಪಟ್ಟಣದ ನಾಲ್ಕು ಕೋವಿಡ್‌ ಸೆಂಟರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರಿಗೆ, ಕರ್ತವ್ಯ ನಿರತ ಪೊಲೀಸ್‌ ಸಿಬ್ಬಂದಿಗೆ, ಪೌರ ಕಾರ್ಮಿಕರಿಗೆ ಊಟ-ಉಪಹಾರ ವ್ಯವಸ್ಥೆ ಕಲ್ಪಿಸಿದ್ದಾರೆ. ಸೇವಾನಿರತ ನಾಯಕರು: ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ರಾಯರ ಹಾಗೂ ಅಭಿಮಾನಿ ಬಳಗದವರು ಸಹ ಕೆಂಗೇರಿಮಡ್ಡಿಯಲ್ಲಿನ ಬಡವರಿಗೆ ತರಕಾರಿ ಕಿಟ್‌, ಪೊಲೀಸರಿಗೆ ಮಾಸ್ಕ್ ವಿತರಿಸಿದ್ದಾರೆ.

ರಬಕವಿಯ ಡಾ| ಪದ್ಮಜೀತ್‌ ನಾಡಗೌಡ ಅವರು ಕೋವಿಡ್‌ ಸೆಂಟರ್‌ ರೋಗಿಗಳಿಗೆ ನಿರಂತರ ಊಟದ ವ್ಯವಸ್ಥೆ ಮಾಡಿದ್ದಾರೆ. ಕಾಂಗ್ರೆಸ್‌ ಯುವ ಕಾರ್ಯಕರ್ತ ಸೂರಜ್‌ ಅವಟಿ ಲಾರಿ ಚಾಲಕರಿಗೆ ಊಟದ ವ್ಯವಸ್ಥೆ ಮಾಡಿಸುತ್ತಿದ್ದಾರೆ. ಬಿಜೆಪಿ ಮುಖಂಡ ಚನ್ನಪ್ಪ ಪಟ್ಟಣಶೆಟ್ಟಿ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ, ಗ್ರಾಪಂ ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್‌ ವಿತರಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next