ಯಡ್ರಾಮಿ: ಎಲ್ಲ ಸಮಾಜ ಬಾಂಧವರ ನೋವು ನಲಿವುಗಳಿಗೆ ಸ್ಪಂದಿಸುವಂತಹ ಶ್ರೇಷ್ಠ ವ್ಯಕ್ತಿತ್ವ ಹೊಂದಿದ್ದ ದಿ. ರುದ್ರಗೌಡ ಬಿರಾದಾರ ಸ್ಮರಣೀಯರಾಗಿದ್ದಾರೆ ಎಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಹೇಳಿದರು.
ತಾಲೂಕಿನ ಮುರಗಾನೂರ ಗ್ರಾಮದಲ್ಲಿ ದಿ.ರುದ್ರಗೌಡ ಬಿರಾದಾರ ಅವರ ಪ್ರಥಮ ಪುಣ್ಯಸ್ಮರಣೆ ಹಾಗೂ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜ ಸೇವೆ ಮಾಡುವುದು ಮನುಷ್ಯನಿಗೆ ದೇವರು ನೀಡಿದ ಉತ್ತಮ ಅವಕಾಶ. ಅದರಲ್ಲೂ ನಿಸ್ವಾರ್ಥದಿಂದ ಸೇವೆ ಮಾಡಿದಾಗ ಅದರ ಮೌಲ್ಯ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ದಿ.ರುದ್ರಗೌಡರ ಜೀವನ ಆದರ್ಶಪ್ರಾಯವಾಗಿದೆ ಎಂದರು.
ಸೊನ್ನ ವಿರಕ್ತಮಠದ ಪೂಜ್ಯ ಡಾ| ಶಿವಾನಂದ ಮಹಾ ಸ್ವಾಮೀಜಿ, ಬಸವನ ಸಂಗೋಳಗಿಯ ಪೂಜ್ಯ ಮದಗೊಂಡ ಮಹಾರಾಜರು ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಹಿರಿಯ ಮುಖಂಡ ಮಲ್ಲಿನಾಥಗೌಡ ಪಾಟೀಲ ಯಲಗೋಡ, ರಮೇಶ ವಕೀಲ ಕುಲಕರ್ಣಿ, ಜೇವರ್ಗಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಹಳ್ಳೆಪ್ಪಾಚಾರ್ಯ ಜೋಶಿ, ಮಾಜಿ ಜಿಪಂ ಸದಸ್ಯ ರೇವಣಸಿದ್ಧಪ್ಪ ಸಂಕಾಲಿ, ಭೀಮರಾವ್ ಗುಜಗೊಂಡ, ಶಿವಾನಂದ ಸಾಹು ಭಾಸಗಿ, ಮಲ್ಲಣ್ಣಗೌಡ ಬಿರಾದಾರ ಮಾಗಣಗೇರಿ, ಶರಣಗೌಡ ಹಿರೇಗೌಡರ, ರುಕುಂ ಪಟೇಲ, ಬಸವರಾಜ ಖಾನಗೌಡರ್, ನಿಂಗಣ್ಣ ಬಿರಾದಾರ, ಬಸವಂತ್ರಾಯಗೌಡ ಬಿರಾದಾರ, ಗಂಗಾಧರ ಹೊಸಮನಿ, ದಿ. ರುದ್ರಗೌಡ ಬಿರಾದಾರ ಹಾಗೂ ಅಭಿಮಾನಿ ಬಳಗದವರು ಇದ್ದರು.